ಬಂಧಿಸಲು ಬಂದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಪ್ರಯತ್ನಿಸಿದ ರೌಡಿಶೀಟರ್ ಒಬ್ಬನ ಕಾಲಿಗೆ ಪೊಲೀಸರು ಗುಂಡುಹೊಡೆದು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿಶೀಟರ್ ಪೂರ್ಣೇಶ್ ಗೌಡ ಗುಂಡೇಟು ತಿಂದು ಬಂಧಿತನಾಗಿರುವ ಆರೋಪಿ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಧ್ಯಮಕ್ಕೆ ನೀಡಿರುವ ಮಾಹಿತಿ ಹೀಗಿದೆ ;
ಬಾಳೆಹೊನ್ನೂರು ಪೊಲೀಸ್ ಠಾಣಾ ಸರಹದ್ದಿನ ಮಾಗಲು ಗ್ರಾಮದ ವಾಸಿ ಎಂ ಕೆ ಪೂರ್ಣೇಶ್ ಬಿನ್ ಕೆಂಚೇಗೌಡ ಪ್ರಾಯ 31 ವರ್ಷ ಈತನ ವಿರುದ್ದ ದಿ :16/09/2023 ರಂದು ಠಾಣೆಯಲ್ಲಿ ದಾಖಲಾಗಿದ್ದ 112/2023 ಐಪಿಸಿ 504,326,307 ಪ್ರಕರಣದಡಿಯಲ್ಲಿ ಸುಮಾರು ಒಂದೂವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವ ಸಲುವಾಗಿ ಇದ್ದ ಖಚಿತ ಮಾಹಿತಿ ಮೇರೆಗೆ ನಾಲ್ಕು ಜನ ಸಿಬ್ಬಂದಿಯವರೊಂದಿಗೆ ಪಿಎಸ್ಐ ಬಾಳೆಹೊನ್ನೂರು ಠಾಣೆ ರವರು ದಿ:30/10/2023 ಇಂದು ಬೆಳಗಿನ ಜಾವ ಆರೋಪಿಯು ಬಚ್ಚಿಟ್ಟುಕೊಂಡಿದ್ದ ಸ್ಥಳಕ್ಕೆ ಧಾವಿಸಿ ಮನೆಯನ್ನು ಸುತ್ತುವರೆದು ಆರೋಪಿಗೆ ಎಚ್ಚರಿಕೆ ನೀಡಿ ಶರಣಾಗಲು ತಿಳಿಸಿದ ಸಮಯದಲ್ಲಿ ಸದರಿ ಆರೋಪಿಯು ಅಲ್ಲಿಂದ ಪರಾರಿಯಾಗಲೆತ್ನಿಸಿ ಸಿಪಿಸಿ ಮಂಜುನಾಥ್ ಇವರಿಗೆ ಚಾಕುವಿನಿಂದ ಇರಿದು ಎಡಗೈ ಭುಜದ ಹತ್ತಿರ ರಕ್ತಗಾಯ ವನ್ನುಂಟುಮಾಡಿ ಇತರರ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದ.
ಈ ಸಂದರ್ಭದಲ್ಲಿ ಬಾಳೆಹೊನ್ನೂರು ಪಿ.ಎಸ್.ಐ ದಿಲೀಪ್ ಕುಮಾರ್ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿ ಶರಣಾಗಲೂ ತಿಳಿಸಿದರೂ ಆರೋಪಿಯು ಸಿಬ್ಬಂದಿ ಮತ್ತು ಇವರ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದು ಪೋಲೀಸರ ಪ್ರಾಣ ರಕ್ಷಣೆ ಉದ್ದೇಶದಿಂದ ಆರೋಪಿಯ ಕಾಲಿಗೆ ಗನ್ ಫೈಯರ್ (ಗುಂಡೇಟು) ಮಾಡಿರುತ್ತಾರೆ.
ಗಾಯಗೊಂಡ ಪೊಲೀಸ್ ರಾದ ಸಿಪಿಸಿ ಮಂಜುನಾಥ್ ಇವರನ್ನು ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ಹಾಗೂ ಆರೋಪಿಯಾದ ಎಂ.ಕೆ ಪೂರ್ಣೇಶ್ ಈತನನ್ನು ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಇವರ ಆರೋಗ್ಯವು ಸ್ಥಿರವಾಗಿರುತ್ತದೆ.
ಪ್ರಕರಣದ ತನಿಖೆಯು ಪ್ರಗತಿಯಲ್ಲಿದೆ.
ಸದರಿ ಆರೋಪಿಯಾದ ಎಂ ಕೆ ಪೂರ್ಣೇಶ್ ಬಿನ್ ಕೆಂಚೇಗೌಡ ರೌಡಿಶೀಟರ್ ಆಗಿದ್ದು ಈತನ ಮೇಲೆ ಬಾಳೆಹೊನ್ನೂರು ಠಾಣೆಯಲ್ಲಿ ದಾಖಲಾಗಿರುವ 8 ಪ್ರಕರಣಗಳ ವಿವರ ಈ ಕೆಳಕಂಡಂತಿದೆ.
1) 45/2011, ಐಪಿಸಿ 160
2) 154/2016, ಐಪಿಸಿ 323,504,324,506
3) 12/2020, ಐಪಿಸಿ 504,307,506
4) 64/2020, ಐಪಿಸಿ 341,504,506,324
5) 67/3020, ಐಪಿಸಿ 504,353,332,307
6) 23/2022, ಐಪಿಸಿ 341,504,506,323,324
7) 91/2022, ಐಪಿಸಿ 307
8) 112/2023, ಐಪಿಸಿ 504,326,307