October 5, 2024

ಮೂಡಿಗೆರೆ ತಾಲ್ಲೂಕ್ ಕಸಬಾ ಹೋಬಳಿ ಕುನ್ನಹಳ್ಳಿ ಗ್ರಾಮದ ನಿವೃತ್ತ ಯೋಧ ಕೆ.ಎಸ್. ಲಕ್ಷ್ಮಣಗೌಡ (75 ವರ್ಷ) ಶನಿವಾರ ನಿಧನ ಹೊಂದಿದ್ದಾರೆ.

ಲಕ್ಷ್ಮಣಗೌಡರಿಗೆ ಮೂಡಿಗೆರೆ ತಾಲ್ಲೂಕು ನಿವೃತ್ತ ಯೋಧರ ಸಂಘದಿಂದ ಗೌರವಪೂರ್ವಕ ಅಂತಿಮ ನಮನ ಸಲ್ಲಿಸಲಾಯಿತು.

ಶ್ರೀಯುತ ಲಕ್ಷ್ಮಣಗೌಡರು ಕುನ್ನಹಳ್ಳಿ ಗ್ರಾಮದ ಶ್ರೀಮತಿ ಶ್ರಿ ಕಾಳಮ್ಮ ಸೋಮಯ್ಯ ನವರ ತೃತೀಯ ಪುತ್ರರಾಗಿ ದಿನಾಂಕ..23-03-1948 ರಲ್ಲಿ ಜನಿಸಿದರು. 1966ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿ . ಬೆಳಗಾವಿಯಲ್ಲಿ ತರಭೇತಿ ಪಡೆದು , ಜಮ್ಮು ಕಾಶ್ಮೀರ, ಸಿಕ್ಕಿಂ, ಅಸ್ಸಾಂ, ಉತ್ತರ ಪ್ರದೇಶ , ರಾಜಸ್ಥಾನ, ಗುಜಾರಾತ್ ನಲ್ಲಿ 19 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

1973 ರಲ್ಲಿ K.B. ಕಮಲಾಕ್ಷಿ ಇವರನ್ನು ಬಾಳಸಂಗಾತಿಯಾಗಿ ಸ್ವೀಕರಿಸಿ, 3 ಗಂಡು ಮಕ್ಕಳನ್ನು ಹೊಂದಿರುತ್ತಾರೆ. 1986ರಿಂದ ಮೂಡಿಗೆರೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿನಲ್ಲಿ 25 ವರ್ಷಗಳ ಕಾಲ ಸೆಕ್ಯೂರಿಟಿಯಾಗಿ ಸೇವೆ ಸಲ್ಲಿಸಿರುತ್ತಾರೆ.

ಲಕ್ಷ್ಮಗೌಡರು ಉತ್ತಮ ಕೃಷಿಕರಾಗಿದ್ದರು.

ದಿನಾಂಕ.21-10-2023ರಂದು ಶನಿವಾರ ರಾತ್ರಿ10-50 ಕ್ಕೆ ವಯೋಸಹಜ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

ನಿವೃತ ಯೋಧರ ಸಂಘದ ಅಧ್ಯಕ್ಷರಾದ M.K.ಚಂದ್ರೇಶ್ ಹಾಗೂ ನಿವೃತ ಯೋಧರಿಂದ ಗೌರವ ಸಮರ್ಪಣೆ ಸಲ್ಲಿಸಲಾಯಿತು.

ಕುನ್ನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಲಕ್ಷ್ಮಣಗೌಡ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ