ಮೂಡಿಗೆರೆ ತಾಲ್ಲೂಕಿನ ಬಣಕಲ್ ಪಟ್ಟಣದಲ್ಲಿ ಸರಣಿ ಕಳ್ಳತನ ಮಾಡಿದ್ದ ಪ್ರಕರಣವನ್ನು ಬೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸರಣಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂದಿಸುವಲ್ಲಿ ಬಣಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾವಣೆಗೆರೆ ಮೂಲದ ಹುಸೇನ್ ಸಾಬ್ ಬಿನ್ ಅಬ್ದುಲ್ ರಝಕ್ ಬಂಧಿತ ಆರೋಪಿ. ಈತ ಈಗ್ಗೇ ಕೆಲ ದಿನಗಳ ಹಿಂದೆ ಬಣಕಲ್ ಪಟ್ಟಣದಲ್ಲಿ ಒಂದೇ ರಾತ್ರಿ ಮೊಬೈಲ್ ಅಂಗಡಿ, ದಿನಸಿ ಅಂಗಡಿ.ಹಾಗೂ ಬಟ್ಟೆ ಅಂಗಡಿಯಲ್ಲಿ ಹಣ ಹಾಗೂ ಮೊಬೈಲ್ ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ.
ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು. ಆರೋಪಿಯನ್ನು ಹಿಡಿಯಲು ಸೂಕ್ತ ಸಾಕ್ಷ್ಯಗಳ ಬೆನ್ನತ್ತಿದ್ದ ಪೊಲೀಸರು ಆರೋಪಿಯನ್ನು ಮಂಗಳೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪಿ. ಎಸ್. ಐ. ಗಳಾದ ಜಂಬೂರಾಜ್ ಮಹಾಜನ್, ರನ್ನಗೌಡ ಪಾಟೀಲ್, ಸಿಬ್ಬಂದಿಗಳಾದ ಜಗದೀಶ್, ಮೆಹಬೂಬ್, ದಿಲೀಪ್, ಕಿರಣ್ ಭಾಗವಹಿಸಿದ್ದರು.