October 5, 2024

ಕ್ರೀಡಾ ಭಾರತಿ ಸಕಲೇಶಪುರ ವತಿಯಿಂದ ಶನಿವಾರ ಸಕಲೇಶಪುರ ಪಟ್ಟಣದ ಪುರಸಭೆಯ ಪೌರಕಾರ್ಮಿಕ ಮಹಿಳೆಯರಿಗೆ ಗೌರಿ ಬಾಗಿನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕ್ರೀಡಾ ಭಾರತಿ ಪ್ರಮುಖರಾದ ಮೋಹನ್ ಕುಮಾರ್ ಅವರು ; ನಗರ ಸ್ವಚ್ಚವಾಗಿ ಇಡಲು ಪೌರ ಕಾರ್ಮಿಕರ ಪಾತ್ರ ಬಹಳ ಮಹತ್ವದ್ದು. ಪ್ರತಿನಿತ್ಯ ಮಳೆ ಗಾಳಿ ಚಳಿಯೆನ್ನದೆ ಮುಂಜಾವಿನಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾಗಿ ಸ್ವಚತೆ ಯಲ್ಲಿ ತೊಡಗುವ ಆ ತಾಯಂದಿರ ಸೇವೆ ಅಮೂಲ್ಯವಾದದ್ದು. ಪ್ರತಿ ನಿತ್ಯ ಅವರ ಸೇವೆ ಪಡೆಯುವ ನಾವು ಅವರ ಪರಿಶ್ರಮಕ್ಕೆ ಬೆಲೆ ಕೊಡುವುದೇ ಕಮ್ಮಿ .  ಅವರ ಸೇವೆ ನೆನೆದು ತಾಯಂದಿರಿಗೆ ಬಾಗಿನ ಕೊಟ್ಟು ಗೌರವಿಸುವ   ಕಾರ್ಯಕ್ರಮವನ್ನು ಕ್ರೀಡಾ ಭಾರತಿ ಸಕಲೇಶಪುರ ಪ್ರತಿವರ್ಷ ನಡೆಸುತ್ತಾ ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ದರ್ಶಿನಿ ರಾಕೇಶ್, ಉಷಾ, ಕ್ರೀಡಾ ಭಾರತಿ ಸದಸ್ಯರು, ಪುರಸಭೆ ಸಿಬ್ಬಂದಿ ಆಡಳಿತ ವರ್ಗ, ಪುರಸಭೆ ಸದಸ್ಯರು  ಭಾಗಿಯಾಗಿದ್ದರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ