ಮೂಡಿಗೆರೆ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ(ರಿ) ಮಹಿಳಾ ಘಟಕ ಮತ್ತು ಯುವ ಘಟಕದ ಹಾಗೂ ಪುಷ್ಪಗಿರಿ ಸಾಂಸ್ಕøತಿಕ ಪ್ರತಿಷ್ಠಾನ ಗೋಣಿಬೀಡು ಇವರ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಧಾರ್ಮಿಕ ದುಂದುಭಿ ಮತ್ತು ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೆಪ್ಟಂಬರ್ 4ರಂದು ಸೋಮವಾರ ಬೆಳಿಗ್ಗೆ 10-30 ರಿಂದ ಮೂಡಿಗೆರೆ ಮಹಂತಿನ ಮಠ ಸಮುದಾಯ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಗವನಹಳ್ಳಿ ಮಠದ ಮನೆಯ ವೇ. ಜಿ.ಎಸ್. ಮಹೇಶ್ವರಯ್ಯ ಶಾಸ್ತ್ರಿಗಳು ಮತ್ತು ಮೂಡಿಗೆರೆ ಮಹಂತಿನ ಮಠ ಅರ್ಚಕರಾದ ವೇ ಶ್ರೀ ಪ್ರಸನ್ನ ಶಾಸ್ತ್ರಿಗಳು ಶ್ರಾವಣ ಮಾಸದ ವಿಶೇಷ ಪೂಜೆ ನೆರವೇರಿಸುವರು.
ಹಾಗೆಯೇ ಕಾರ್ಯಕ್ರಮದಲ್ಲಿ ಆಧುನಿಕ ವಚನಕಾರರು, ಹಾಗೂ ಸಂಗೀತ ಕಲಾವಿದರಾದ ಶ್ರೀ ರುದ್ರಮೂರ್ತಿ ಎಲೆರಾಂಪುರ ಮತ್ತು ಶ್ರೀಮತಿ ಶಿಲ್ಪಾ ತಂಡದಿಂದ ಸಂಗೀತ ಕಾರ್ಯಕ್ರಮ ಮತ್ತು ವಚನಗಳಲ್ಲಿ ವೀರಶೈವ ಧರ್ಮ ಕುರಿತಾಗಿ ಉಪನ್ಯಾಸ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕರು ಮತ್ತು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ನಿರ್ದೇಶಕರಾದ ಮೋಹನ್ ರಾಜಣ್ಣ ಕೋರಿದ್ದಾರೆ.