ಮೂಡಿಗೆರೆ ಹ್ಯಾಂಡ್ ಪೋಸ್ಟ್ ಬಳಿ ಹೆದ್ದಾರಿ ಪಕ್ಕದಲ್ಲಿ ಕಸದ ತೊಟ್ಟಿಯೊಂದರ ಬಳಿ ರಾಶಿ ರಾಶಿ ಕಸ ಕೊಳೆಯುತ್ತಿದ್ದುದರ ಬಗ್ಗೆ ಮೊನ್ನೆ ದರ್ಪಣ ನ್ಯೂಸ್ ವರದಿ ಪ್ರಕಟಿಸಿತ್ತು.
ಈ ಕಸದ ರಾಶಿಯಿಂದ ಸುತ್ತಲ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಗಳ ಬಗ್ಗೆ ಗಮನ ಸೆಳೆದಿತ್ತು. ಕಸ ವಿಲೇವಾರಿ ಮಾಡದೇ ಇದ್ದರೆ ಗ್ರಾಮ ಪಂಚಾಯಿತಿ ಮುಂದೆ ಕಸತಂದು ಸುರಿಯುವ ಸಾರ್ವಜನಿಕರ ಎಚ್ಚರಿಕೆ ನೀಡಿದ್ದರ ಪತ್ರಿಕೆ ವರದಿ ಪ್ರಕಟಿಸಿತ್ತು.
ಇದೀಗ ವರದಿಯ ಫಲಶೃತಿ ಎಂಬಂತೆ ಸ್ಥಳೀಯ ಬಿದರಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಈ ಬಗ್ಗೆ ತುರ್ತು ಕ್ರಮ ವಹಿಸಿ ಕಸದ ರಾಶಿಯನ್ನು ಸಾಗಿಸಿ ಸ್ವಚ್ಚಗೊಳಿಸಲು ಮುತುವರ್ಜಿ ವಹಿಸಿದೆ.
ಬಹುದಿನಗಳ ತಮ್ಮ ತೊಂದರೆಯ ಬಗ್ಗೆ ಆಡಳಿತದ ಗಮನ ಸೆಳೆದ ಪತ್ರಿಕೆಗೆ ಮತ್ತು ಪತ್ರಿಕೆಯ ವರದಿಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.