ಪೆಟ್ರೋಲ್ ಬಂಕಿನಲ್ಲಿ ವಾಹನಕ್ಕೆ ಪೆಟ್ರೋಲ್ ಹಾಕಿಸುವ ಸಂದರ್ಭದಲ್ಲಿ ಬೀಳಿಸಿ ಹೋಗಿದ್ದ ಹಣದ ಪರ್ಸ್ ಅನ್ನು ಹಿಂದಕ್ಕೆ ಮರಳಿಸಿದ ಘಟನೆ ಬುಧವಾರ ಕೊಟ್ಟಿಗೆಹಾರದಲ್ಲಿ ನಡೆದಿದೆ.
ಬಣಕಲ್ ನ ಅಬ್ದುಲ್ ರೆಹಮಾನ್ ಗುಜರಿ ವ್ಯಾಪಾರಿಯಾಗಿದ್ದು, ವ್ಯಾಪಾರಕ್ಕಾಗಿ ತನ್ನ ಗೂಡ್ಸ್ ವಾಹನಕ್ಕೆ ಪೆಟ್ರೋಲ್ ಹಾಕಿ ಪರ್ಸ್ ಕಳೆದುಕೊಂಡು ಹೋಗಿದ್ದರು. ಪರ್ಸ್ ನಲ್ಲಿ ಹತ್ತು ಸಾವಿರ ಹಣವಿದ್ದು ಅದನ್ನು ಪೆಟ್ರೋಲ್ ಬಂಕಿನ ಸಿಬ್ಬಂದಿ ಪ್ರಕಾಶ್ ಪೂಜಾರಿ ಜೋಪಾನವಾಗಿ ಎತ್ತಿಟ್ಟು ಪರ್ಸ್ ಕಳೆದುಕೊಂಡಿದ್ದ ಅಬ್ದುಲ್ ರೆಹಮಾನ್ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ತಾನು ಕಷ್ಟಪಟ್ಟು ದುಡಿದಿದ್ದ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದ ಅಬ್ದುಲ್ ರೆಹಮಾನ್ ತಾನು ಕಳೆದುಕೊಂಡಿದ್ದ ಪರ್ಸ್ ಅನ್ನು ಹಿಂತಿರುಗಿಸಿದ್ದಕ್ಕಾಗಿ ಪೆಟ್ರೋಲ್ ಬಂಕ್ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಶರತ್, ಸುದೀಪ್, ಶಶಾಂಕ್ ಇದ್ದರು.