ಮೂಡಿಗೆರೆ ಪಟ್ಟಣದ ಸ್ವತಃಶ್ಚಲಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬುಧವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಚಂದ್ರೇಶ್ ಮತ್ತು ಉಪಾಧ್ಯಕ್ಷರಾಗಿ ಜಯಾನಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಅಮರನಾಥ್ ಮಾತನಾಡಿ, ಆಟೋ ಚಾಲಕರು ಎಲ್ಲಾ ಸಂದರ್ಭದಲ್ಲೂ ಒಗ್ಗಟ್ಟಿನಿಂದ ಇರಬೇಕು. ಯಾರಿಗಾದರೂ ತೊಂದರೆ ಎದುರಾದರೆ ಅದನ್ನು ಪರಿಹರಿಸಲು ಎಲ್ಲಾ ಚಾಲಕರು ಕೈಜೋಡಿಸಬೇಕು ಎಂದು ಹೇಳಿದರು.
ತಾಲೂಕು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ, ಆಟೋ ಚಾಲಕರಲ್ಲಿ ಬಹುತೇಕ ಬಡವರಿದ್ದು ಸರಕಾರದ ಸೌಲಭ್ಯಗಳು ಆಟೋ ಚಾಲಕರಿಗೂ ಸಿಗುವಂತಾಗಬೇಕೆಂದು ಹೇಳಿದರು.
ಮಾಜಿ ಅಧ್ಯಕ್ಷರಾದ ಸುಧೀರ್ ಚಕ್ರಮಣಿ, ಪ್ರಕಾಶ್ ಗಣೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ್, ಪದಾಧಿಕಾರಿಗಳಾದ ರಾಜು, ಪುರುಷೋತ್ತಮ್, ನಾಗರಾಜ್, ಹರೀಶ್ ಮತ್ತಿತರರಿದ್ದರು.