ಚಾರ್ಮಾಡಿ ಘಾಟ್ ರಸ್ತೆಯಲ್ಲಿ ನಿನ್ನೆ ಒಂದೇ ದಿನ ಮೂರು ಅಪಘಾತಗಳು ಸಂಭವಿಸಿದೆ.
ಚಾರ್ಮಾಡಿ ಘಾಟ್ ನಲ್ಲಿ ಕಾರ್ ಪಲ್ಟಿಯಾಗಿದ್ದು, ಬೆಂಗಳೂರಿನಿಂದ ಧರ್ಮಸ್ಥಳ ಕ್ಕೆ ತೆರಳುತ್ತಿದ್ದ ಕಾರಿನಲ್ಲಿದ್ದ ಪ್ರವಾಸಿಗರು ಗಾಯಗೊಂಡಿದ್ದಾರೆ., ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಾಗಳಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಮತ್ತೊಂದು ಕಾರು ಚರಂಡಿಗೆ ಉರುಳಿ ಬಿದ್ದಿದೆ, ಹೀಗೆ ಒಟ್ಟು ಒಂದೇ ದಿನ ಮೂರು ಅಪಘಾತಗಳು ಸಂಭವಿಸಿವೆ.
ಘಾಟ್ ನ ಆರನೇ ತಿರುವಿನಲ್ಲಿ ಲಾರಿಯೊಂದು ಕೆಟ್ಟುನಿಂತಿದ್ದು ರಾತ್ರಿಯಿಡೀ ಘಾಟ್ ನಲ್ಲಿ ವಾಹನಗಳೂ ಸಂಚರಿಸಲಾಗದೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾತ್ರಿಯಿಂದ ಮುಂಜಾನೆಯವರಿಗೂ ಪರದಾಡಿದ ವಾಹನ ಸವಾರರು. ರಾತ್ರಿ 11 ಗಂಟೆಯಿಂದ ಮುಂಜಾನೆ ನಾಲ್ಕು ಗಂಟೆ ವರೆಗೂ ಟ್ರಾಫಿಕ್ ಜಾಮ್ ಆಗಿತ್ತು. ಚಾರ್ಮಾಡಿ ಘಾಟಿಯ 10 ಕಿಮೀ ವರೆಗೂ ಟ್ರಾಫಿಕ್ ಜಾಮ್ ಆಗಿ ದಟ್ಟ ಕಾಡಿನ ಮಧ್ಯೆ ಪರದಾಡಿದ ವಾಹನ ಸವಾರರು. ಇಡೀ ರಾತ್ರಿ ತುಂತುರು ಮಳೆ ತೀವ್ರ ಚಳಿಯಿಂದ ವಾಹನ ಸವಾರರು ಪರದಾಡುವಂತಾಯಿತು.
ವರದಿ : ತನು ಕೊಟ್ಟಿಗೆಹಾರ