ಪ್ರಸಿದ್ದ ಪ್ರವಾಸಿ ಸ್ಥಳ ದೇವರಮನೆಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ.
ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೇವರಮನೆಯಿಂದ ಗುತ್ತಿ ಕಡೆಗೆ ಸಾಗುವ ರಸ್ತೆಯ ಬದಿಯಲ್ಲಿ ಶವ ಪತ್ತೆಯಾಗಿದೆ.
ರಸ್ತೆಯಿಂದ ಕೇವಲ ಹತ್ತು ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಶವವನ್ನು ಕಲ್ಲುಗಳಿಂದ ಮುಚ್ಚಿಟ್ಟಂತೆ ತೋರುತ್ತಿದೆ ಎನ್ನಲಾಗಿದೆ. ಕೊಲೆ ಮಾಡಿ ಶವ ಎಸೆದು ಹೋಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಶವ ಪತ್ತೆಹಚ್ಚಲಾಗದಷ್ಟು ಕೊಳೆತ ಸ್ಥಿತಿಗೆ ತಲುಪಿದ್ದು ಪರಿಸರದ ತುಂಬೆಲ್ಲಾ ದುರ್ವಾಸನೆ ತುಂಬಿದೆ.
ಸ್ಥಳಕ್ಕೆ ಮೂಡಿಗೆರೆ ಮತ್ತು ಬಣಕಲ್ ಠಾಣೆ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ.
ವರದಿ : ನಯನ ತಳವಾರ