October 5, 2024

ಒಡಿಶಾ ರಾಜ್ಯದ ಬಾಲಾಸೋರ್ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿರುವ ರೈಲು ಅಪಘಾತದಲ್ಲಿ 288 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದು, 800ಕ್ಕೂ ಅಧಿಕ ಮಂದಿ ತೀವ್ರ ಗಾಯಗೊಂಡಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ 110 ಮಂದಿ ಜೈನ ಯಾತ್ರಾರ್ಥಿಗಳು ಪವಾಡ ಸದೃಷವಾಗಿ ಪಾರಾಗಿದ್ದಾರೆ.

ಕಳಸ, ಕುದುರೆಮುಖ, ಸಂಸೆ, ಹೊರನಾಡು ಭಾಗದಿಂದ ಈ ಯಾತ್ರಿಗಳು ಕೊಲ್ಕತ್ತಾದ ಪವಿತ್ರ ಕ್ಷೇತ್ರವಾದ ಶ್ರೀ ಸಮ್ಮೇದ್ ಶಿಖರ್ಜಿ ಗಿರಿಗೆ ಮಹಿಳೆಯರು, ಮಕ್ಕಳು ವೃದ್ಧರಾದಿಯಾಗಿ ಬೇರೆ ಬೇರೆ ಕುಟುಂಬದ 110 ಮಂದಿ ಪ್ಯಾಕೇಜ್ ಪ್ರವಾಸ ಹೊರಟಿದ್ದು, ಅಪಘಾತದಲ್ಲಿ ಬದುಕುಳಿದಿರುವುದೇ ಅಚ್ಚರಿ. ಇವರೆಲ್ಲರೂ ಕಳಸದಿಂದ ಬಸ್ನಲ್ಲಿ ಹೊರಟು ಬೆಂಗಳೂರು ತಲುಪಿ ಶುಕ್ರವಾರ ಬೆಳಗ್ಗೆ 10.30 ಕ್ಕೆ ಹೌರಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು.

ಇಂಜಿನ್ ಬದಲಾವಣೆಯಿಂದ 110 ಜನರು ಬದುಕುಳಿದರು.
ಕಳಸ ತಾಲ್ಲೂಕಿನ 110 ಮಂದಿ ಯಾತ್ರಾರ್ಥಿಗಳು ರೈಲಿನ ಹಿಂಬದಿಯ ಎಸ್-5, ಎಸ್ 6 ಹಾಗೂ ಎಸ್- 7ಮೂರು ಬೋಗಿಯಲ್ಲಿದ್ದರು. ರೈಲು ಮಧ್ಯಾಹ್ನದ ವೇಳೆಗೆ ವಿಶಾಪಟ್ಟಣಂ ತಲುಪುತ್ತಿದ್ದಂತೆ ಇಂಜಿನ್ ಬದಲಾವಣೆ ಮಾಡಲಾಯಿತು. ಇಂಜಿನ್ ಬದಲಾಗುತ್ತಿದ್ದಂತೆ ಇವರು ಪ್ರಯಾಣಿಸುತ್ತಿದ್ದ ಮೂರು ಬೋಗಿಗಳು ರೈಲಿನ ಮುಂಭಾಗಕ್ಕೆ ಬಂದವು. ಆದರೆ ಅಪಘಾತ ಸಂಭವಿಸಿದಾಗ ಹಿಂಬದಿಯ ಮೂರ್ನಾಲ್ಕು ಬೋಗಿಗಳು ರೈಲಿನಿಂದ ಕಳಚಿಕೊಂಡು ಮಗುಚಿ ಬಿದ್ದಿದ್ದು, ಅದರಲ್ಲಿದ್ದ ಹಲವು ನತದೃಷ್ಠರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.

ಬಾಲಸೋರ್ ಬಳಿ ಬೆಂಗಳೂರು-ಹೌರಾ ಎಕ್ಸ್ಪ್ರೆಸ್ ರೈಲು ಚಲಿಸುವಾಗ ಪಕ್ಕದ ಹಳಿಯಲ್ಲಿ ಎದುರಿನಿಂದ ಚೆನ್ನೈ ಕಡೆಗೆ ಸಾಗುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ತನ್ನ ಹಳಿ ಬಿಟ್ಟು ಬೇರೊಂದು ಹೆಚ್ಚುವರಿ ಹಳಿಯ ಮೇಲೆ ಚಲಿಸಿ ಆ ಹಳಿಯ ಮೇಲೆ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯಿತು. ಈ ವೇಳೆ ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನ ಹಿಂಬದಿ ಬೋಗಿಗಳು ಹಳಿಯಿಂದ ಕೆಳಕ್ಕೆ ಜಾರಿ ಬೆಂಗಳೂರು-ಹೌರಾ ಎಕ್ಸ್ಪ್ರೆಸ್ ರೈಲಿನ ಹಿಂಬದಿಗೆ ಬಡಿಯಿತು. ಆಗ ಬೆಂಗಳೂರು-ಹೌರಾ ಎಕ್ಸ್ಪ್ರೆಸ್ ರೈಲಿನ ಮೂರ್ನಾಲ್ಕು ಬೋಗಿಗಳು ಕಳಚಿಕೊಂಡು ಪಕ್ಕಕ್ಕೆ ಉರುಳಿ ಬಿದ್ದವು. ಚಾಲಕ ಅಲ್ಲೇ ಬ್ರೇಕ್ ಹಾಕಿದರೂ ವೇಗದಲ್ಲಿದ್ದ ರೈಲು ಸುಮಾರು 3 ಕಿ.ಮೀ.ದೂರದಲ್ಲಿ ಬಂದು ನಿಂತಿತ್ತು.

 

ತೀರ್ಥಯಾತ್ರೆ ಸಮಿತಿ ಅಧ್ಯಕ್ಷ ಕಳಸದ ಬ್ರಹ್ಮದೇವ್ ಜೈನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ನಮ್ಮ ಪ್ರಯಾಣ ಚೆನ್ನಾಗಿ ನಡೆಯುತ್ತಿರುವಾಗಲೇ ಒರಿಸ್ಸಾದ ಗಡಿ ಪ್ರದೇಶ ದಾಟಿ ಇನ್ನು ಸ್ವಲ್ಪ ಹೊತ್ತಿನಲ್ಲಿ ಕೊಲ್ಕತ್ತಾ ತಲುಪಬೇಕೆನ್ನುವಷ್ಟರಲ್ಲಿ ರಾತ್ರಿ 8.30 ರ ವೇಳೆಗೆ ಇದ್ದಕ್ಕಿದ್ದಂತೆ ನಮ್ಮ ರೈಲು ನಿಂತು ಬಿಟ್ಟಿತು. ಅಪಘಾತದ ಭಾರೀ ಸದ್ದು ಕಿವಿಗಪ್ಪಳಿಸಿತು. ಕೂಡಲೇ ಕೆಳಗಿಳಿದು ನೋಡಿದಾಗ ನಾವು ಪ್ರಯಾಣಿಸುತ್ತಿದ ರೈಲಿನ ಕೊನೆಯ ಬೋಗಿಗಳ ಮೇಲೆ ಚೆನ್ನೈ ಎಕ್ಸ್ಪ್ರೆಸ್ ರೈಲಿನ ಬೋಗಿಗಳು ಮಗುಚಿ ಬಿದ್ದ ಪರಿಣಾಮ ನಮ್ಮ ರೈಲಿನ ಕೊನೆಯ ಬೋಗಿಗಳು ಮಗುಚಿ ಬಿದ್ದಿರುವುದು ಕಂಡುಬಂತು. ಅದರಲ್ಲಿದ್ದ ಬಹುತೇಕ ಮಂದಿ ಸಾವಿಗೀಡಾಗಿ ಅನೇಕರು ಗಾಯಗೊಂಡಿದ್ದರು. ಕೂಡಲೇ ಅಕ್ಕಪಕ್ಕದ ನಿವಾಸಿಗಳು ಧಾವಿಸಿ ಬಂದು ರಕ್ಷಣೆಗೆ ಮುಂದಾಗಿದ್ದಲ್ಲದೆ ಆಂಬುಲೆನ್ಸ್ಗಳಿಗೆ ಕರೆ ಮಾಡಿದರು. ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮ್ಮ ಯೋಗಕ್ಷೇಮವನ್ನು ವಿಚಾರಿಸಿ ಪ್ರಯಾಣ ಮುಂದುವರಿಸಲು ವ್ಯವಸ್ಥೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಎಲ್ಲ ಯಾತ್ರಿಗಳೂ ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿ ಕೊಲ್ಕತ್ತಾ ನಗರಕ್ಕೆ ತುಲುಪಿ ಅಲ್ಲಿಂದ ಮೂರು ಬಸ್ಗಳ ಮೂಲಕ ಸುಮೇದ್ ಶಿಖರ್ಜಿ ಯಾತ್ರೆಗೆ ತೆರಳಿದ್ದಾರೆ. ಯಾತ್ರೆಗೆ ಕರೆದೊಯ್ದಿದ್ದ ಸಂಸ್ಥೆಯವರು ಎಲ್ಲ ಯಾತ್ರಿಗಳನ್ನು ಶನಿವಾರ ಸುರಕ್ಷಿತವಾಗಿ ಕೊಲ್ಕತ್ತಾ ನಗರದ ರೈಲು ನಿಲ್ದಾಣಕ್ಕೆ ಕರೆ ತಂದಿದ್ದಾರೆ. ಇಂದು 110 ಮಂದಿ ಯಾತ್ರಿಗಳನ್ನು ಮೂರು ಬಸ್ಗಳ ಮೂಲಕ ಜೈನರ ಪವಿತ್ರ ಯಾತ್ರಾ ಸ್ಥಳವಾಗಿರುವ ಸುಮೇದ್ ಶಿಖರ್ಜಿ ಸ್ಥಳಕ್ಕೆ ಪ್ರಯಾಣ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದ್ದು, ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿರುವುದನ್ನು ಕಂಡು ಯಾತ್ರಿಗಳ ಸಂಬಂಧಿಕರು ನಿಟ್ಟುಸಿರುವ ಬಿಟ್ಟಿದ್ದಾರೆ.

ಈ ದುರಂತದಲ್ಲಿ ಸುಮಾರು 290 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದು, 800ಕ್ಕೂ ಅಧಿಕ ಮಂದಿ ತೀವ್ರ ಗಾಯಗೊಂಡಿದ್ದಾರೆ.

ಘಟನೆ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ.

ಈ ಘಟನೆ ಭಾರತೀಯ ರೈಲ್ವೇ ಇತಿಹಾಸದಲ್ಲಿ ಭೀಕರ ದರಂತಗಳಲ್ಲಿ ಒಂದಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ