October 5, 2024

ಇತ್ತೀಚೆಗೆ ತಾನೆ ಜೆ.ಡಿ.ಎಸ್. ವಿಧಾನಪರಿಷತ್ ಸದಸ್ಯ ಮತ್ತು ಹೆಚ್.ಡಿ. ಕುಮಾರಸ್ವಾಮಿಯವರ ಆಪ್ತ ಎಸ್.ಎಲ್. ಬೋಜೇಗೌಡ ಅವರು ತಮ್ಮ ಮನೆಯಲ್ಲಿ ಬೆಂಬಲಿಗರೊಂದಿಗೆ ಮಾತನಾಡುತ್ತಾ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಗೆ ಮತನೀಡಬೇಕು ಎಂದು ಹೇಳಿದ್ದ ವೀಡಿಯೋ ಒಂದು ವೈರಲ್ ಆಗಿತ್ತು. ಅದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿ ಜೆ.ಡಿ.ಎಸ್. ಪಕ್ಷಕ್ಕೆ ಮುಜುಗರ ಉಂಟುಮಾಡಿತ್ತು.

ಈಗ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅವರು ಚಿಕ್ಕಮಗಳೂರು ಕ್ಷೇತ್ರದ ಚಿಕ್ಕಗೌಜ ಗ್ರಾಮದ ಕಟ್ಟೆಯ ಮೇಲೆ ಕುಳಿತುಕೊಂಡು ಸುತ್ತಲು ಜನರನ್ನು ಸೇರಿಸಿಕೊಂಡು ರಾಜಾರೋಷವಾಗಿ ಕಾಂಗ್ರೇಸ್ ಅಭ್ಯರ್ಥಿಗೆ ಮತನೀಡಬೇಕು ಎಂದು ಕರೆ ನೀಡುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ನಾನು ಇವತ್ತು ಈ ಕಟ್ಟೆಮೇಲೆ ಕುಳಿತುಕೊಂಡು ನಾನು ಹೇಳಿತ್ತಿದ್ದೇನೆ. ನೀವು ಈ ಬಾರಿ ಕಾಂಗ್ರೇಸ್ ಗೆ ಮತನೀಡಬೇಕು ಎಂದಿದ್ದು ಶಾಸಕ ಸಿ.ಟಿ.ರವಿಯವರ ಹೆಸರು ಹೇಳದೇ ಪರೋಕ್ಷವಾಗಿ ಸಿದ್ದರಾಮಯ್ಯನವರನ್ನು ಸಿದ್ರಾಮುಲ್ಲಾ ಖಾನ್ ಎನ್ನುತ್ತಾನೆ, ದೇವೇಗೌಡರಿಗೆ ಮುಂದಿನ ಜನ್ಮದಲ್ಲಿ ಸಾಬ್ರಾಗಿ ಹುಟ್ಟಿ ಎನ್ನುತ್ತಾನೆ, ಹೆಚ್.ಡಿ. ಕುಮಾರಸ್ವಾಮಿಗೆ, ಡಿ.ಕೆ. ಶಿವಕುಮಾರ್ ಗೆ ಇನ್ನೇನೋ ಅನ್ನುತ್ತಾನೆ. ಇಷ್ಟುದ್ದ ಬೆಳೆದಿರುವವನಿಗೆ ನೀವು ಏನ್ ಕಟ್ ಮಾಡಬೇಕು ? ಎಂದು ಜನರನ್ನು ಪ್ರಶ್ನಿಸಿದ್ದು. ನಾವು ಕಾಂಗ್ರೇಸ್ ಜೆಡಿಎಸ್ ನವರು ಹೊಡೆದಾಡುವುದು ಬೇಡ, ಅವ್ನುನ್ನ ಒಂದು ಸರಿ ತಗಿಯೋಣ, ನಾನು ನಮ್ ಕ್ಯಾಂಡಿಡೇಟ್ ಗೆ ಹೇಳ್ಕಂತೀನಿ, ಸಿದ್ರಾಮಯ್ಯಗೆ ಅವಮಾನ ಮಾಡಿರುವವರನ್ನು ನೀವೇನಾದ್ರು ಹಾಲುಮತದವರು ಬೆಂಬಲಿಸಿದರೆ ನಿಮ್ಮ ಹಾಲುಮತದ ಕುಟುಂಬಕ್ಕೆ ಅವಮಾನ ಮಾಡಿದಂಗೆ ಆಗ್ತದೆ ಎಂದು ಬೋಜೇಗೌಡರು ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ರಾಜ್ಯಮಟ್ಟದಲ್ಲಿ ಜೆ.ಡಿ.ಎಸ್. ನ ಬದ್ಧ ವೈರಿಯಾಗಿರುವ ಸಿದ್ಧರಾಮಯ್ಯನವರನ್ನು ಬೆಂಬಲಿಸಿ ಬೋಜೇಗೌಡರು ಮಾತನಾಡಿರುವುದಕ್ಕೆ ಹೆಚ್.ಡಿ.ಕುಮಾರಸ್ವಾಮಿಯವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕು.
ುಂಕುತಿಮ್ಮ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ