ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಣಕಲ್ ಠಾಣಾ ವ್ಯಾಪ್ತಿಯ ಬಡವನದಿಣ್ಣೆ ಗ್ರಾಮದ ಕಾಫಿ ತೋಟವೊಂದರಲ್ಲಿ ಗುರುವಾರ ಈ ಘಟನೆ ನಡೆದಿದೆ.
ಮೂಡಿಗೆರೆ ಸಮೀಪದ ಹಳೇಕೋಟೆ ಕಾರ್ಮಕ್ಕಿ ಗ್ರಾಮದ ಕಲ್ಲೇಶ್ (60 ವರ್ಷ) ಮರದಿಂದ ಬಿದ್ದು ಸಾವನ್ನಪ್ಪಿರುವ ದುರ್ದೈವಿ.
ಈ ಸಂಬಂಧ ಕಲ್ಲೇಶ್ ಅವರ ಪುತ್ರ ಕೌಶಿಕ್ ಬಣಕಲ್ ಠಾಣೆಯಲ್ಲಿ ದೂರು ನೀಡಿದ್ದು ತಮ್ಮ ತಂದೆ ಮನೆಯ ಬಳಕೆಗೆ ಕಟ್ಟಿಗೆ ಸಂಗ್ರಹಿಸಲು ಬಡವನದಿಣ್ಣೆ ಗ್ರಾಮದ ಕಾಫಿ ತೋಟಕ್ಕೆ ಹೋಗಿದ್ದು, ಕಟ್ಟಿಗೆಗಾಗಿ ಕೊಂಬೆಗಳನ್ನು ಕಡಿಯಲು ಮರಹತ್ತಿದ್ದ ವೇಳೆ ಕೊಂಬೆ ಸಮೇತ ಮರದಿಂದ ಬಿದ್ದಿದ್ದಾರೆ. ಮರದಿಂದ ಬಿದ್ದ ಪರಿಣಾಮ ಅವರ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.