October 5, 2024

ಪಾರ್ಟಿಗೆಂದು ಕರೆದುಕೊಂಡು ಹೋಗಿ ಯುವಕನೋರ್ವನನ್ನು ಸ್ನೇಹಿತರೇ ಕೊಲೆ ಮಾಡಿದ ಘಟನೆ ನಡೆದಿದೆ.

ಚಿಕ್ಕಮಗಳೂರು ಸಮೀಪದ ಕುರುವಂಗಿ ಎಂಬಲ್ಲಿ ಅರಣ್ಯ ಪ್ರದೇಶದಲ್ಲಿ ಒಂದು ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಈಗ ಬೆಳಕಿಗೆ ಬಂದಿದೆ.

ಹಾಸನ ಮೂಲದ ಯುವಕರು ಚಿಕ್ಕಮಗಳೂರು ನಗರ ಸಮೀಪದ ಕುರುವಂಗಿ ಬಳಿಯ ಅರಣ್ಯದಲ್ಲಿ ತಮ್ಮ ಸ್ನೇಹಿತನನ್ನು ಕೊಲೆ ಮಾಡಿ ಮಣ್ಣಿನಲ್ಲಿ ಹೂತು ಹಾಕಿದ್ದರು ಎನ್ನಲಾಗಿದೆ.

ತಿಂಗಳ ಹಿಂದೆಯೇ ನಾಪತ್ತೆ ಪ್ರಕರಣ : ಫೆಬ್ರುವರಿ 10ರಂದು ಪುಲ್ಲಿ ಆಲಿಯಾಸ್ ಸಂತೋಷ್ ಕಾಣೆಯಾಗಿದ್ದಾನೆಂದು ತಿಳಿದುಬಂದಿದೆ. ಹಾಸನದ ಬಡಾವಣೆ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸುತ್ತಾ ಹೋದ ಪೊಲೀಸರು ಆತನ ಮೊಬೈಲ್ ಕರೆಗಳು, ನಗರದ ಸಿ.ಸಿ.ಟಿವಿ ದೃಶ್ಯಗಳನ್ನು ಪರಿಶೀಲಿಸಿ ಆತನ ಇಬ್ಬರು ಸ್ನೇಹಿತರಾದ ಪ್ರೀತಂ ಮತ್ತು ಕೀರ್ತಿ ಎಂಬಿಬ್ಬರನ್ನು ಬಂಧಿಸಿದ್ದಾರೆ.

ವಿಚಾರಣೆಯ ವೇಳೆ ಇವರು ತಾವೇ ಕೊಲೆ ಮಾಡಿ ಚಿಕ್ಕಮಗಳೂರು ಸಮೀಪ ಅರಣ್ಯದಲ್ಲಿ ಹೂತು ಹಾಕಿರುವುದನ್ನು ಬಾಯಿ ಬಿಟ್ಟಿದ್ದಾರೆ.
ಅರಣ್ಯದಲ್ಲಿ ಹೆಣ ಹೂತು ಹಾಕಿದ್ದ ಜಾಗವನ್ನು ಆರೋಪಿಗಳು ತೋರಿಸಿದ್ದು, ಶವವನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅದೇ ಅರಣ್ಯ ಪ್ರದೇಶದಲ್ಲಿ ಶವಸಂಸ್ಕಾರ ಮಾಡಿದ್ದಾರೆ.

ಮೃತ ಸಂತೋಷ್ ಮತ್ತು ಕೊಲೆ ಮಾಡಿದ ಆರೋಪಿಗಳು ಎಲ್ಲರೂ ರೌಡಿಶೀಟರ್ ಗಳಾಗಿದ್ದು, ಅವರ ಗುಂಪಿನಲ್ಲಿಯೇ ವೈಮಸ್ಸು ಉಂಟಾಗಿ ಕೊಲೆ ಮಾಡುವುದಕ್ಕೆ ಸ್ಕೆಚ್ ಹಾಕಿದ್ದರು ಎಂದು ತಿಳಿದುಬಂದಿದೆ.

ಪಾರ್ಟಿ ಮಾಡುವ ನೆಪದಲ್ಲಿ ಸಂತೋಷ್ ನನ್ನು ಚಿಕ್ಕಮಗಳೂರು ಸಮೀಪದ ಅರಣ್ಯ ಪ್ರದೇಶಕ್ಕೆ ಕರೆತಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು ಮತ್ತು ಹೆಣವನ್ನು ಅಲ್ಲಿಯೇ ಹೂತು ಹಾಕಿ ಹಾಸನಕ್ಕೆ ಹಿಂತಿರುಗಿದ್ದರು ಎಂದು ತಿಳಿದುಬಂದಿದೆ.

 

ವ್ಯಕ್ತಿ ಆತ್ಮಹತ್ಯೆ ; ಪತ್ನಿ ಪ್ರಿಯಕರನ ವಿರುದ್ಧ ದೂರು ದಾಖಲು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ