ಮಹಾಶಿವರಾತ್ರಿ ಅಂಗವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ನಾಪತ್ತೆಯಾಗಿದ್ದ ಯುವಕ ಆರು ದಿನಗಳ ನಂತರ ಹಾಸನದಲ್ಲಿ ಪತ್ತೆಯಾಗಿದ್ದಾನೆ.
ಅರಸಿಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ತಿಮ್ಲಾಪುರ ಗ್ರಾಮದ ಲವ ಎಂಬ 22 ವರ್ಷದ ಯುವಕ ಪಾದಯಾತ್ರೆಯಲ್ಲಿ ಬಂದು ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಿಂದ ಕಣ್ಮರೆಯಾಗಿದ್ದ. ನಾಪತ್ತೆಯಾಗಿದ್ದ ಲವ ಭಾಗಶಃ ಬುದ್ದಿಮಾಂದ್ಯನಾಗಿದ್ದ.
ಈ ಸಂಬಂಧ ಯುವಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಇದೀಗ ಕಣ್ಮರೆಯಾಗಿ ಆರು ದಿನಗಳ ನಂತರ ಯುವಕ ಹಾಸನದ ಬೈಪಾಸ್ ರಸ್ತೆಯಲ್ಲಿ ಪತ್ತೆಯಾಗಿದ್ದಾನೆ.
ಯುವಕ ಕಣ್ಮರೆಯಾಗಿರುವ ಬಗ್ಗೆ ದರ್ಪಣ ವೆಬ್ ನ್ಯೂಸ್ ನಲ್ಲಿಯೂ ಸುದ್ದಿ ಪ್ರಕಟವಾಗಿತ್ತು.