ಮೂಡಿಗೆರೆ ತಾಲ್ಲೂಕಿನಲ್ಲಿ ಆನೆ, ಹುಲಿ, ಕಾಡುಕೋಣ ಹಾವಳಿಯ ಜೊತೆಗೆ ಈಗ ಚಿರತೆ ಕಾಟ ಪ್ರಾರಂಭವಾಗಿದೆ.
ತಾಲೂಕಿನ ಹಾಲೂರು ಗ್ರಾಮದ ಸಮೀಪ ಚರತೆಯೊಂದು ಜಾನುವಾರನ್ನು ಹತ್ಯೆ ಮಾಡಿದ್ದು, ಸುತ್ತಮುತ್ತಲಿನ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದೆ.
ಹಾಲೂರು ಚಕ್ರಮಣಿ ಗ್ರಾಮದ ಗೋಪಾಲ ಎಂಬುವರು ಕಳೆದ ಎರಡು ದಿನದಿಂದ ಜಾನುವಾರು ವಾಪಾಸು ಮನೆಗೆ ಬಾರದಿದ್ದ ಹಿನ್ನಲೆಯಲ್ಲಿ ಮಂಗಳವಾರ ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಡಿದ್ದಾರೆ. ಈ ಸಂದರ್ಭದಲ್ಲಿ ಚಕ್ರಮಣಿ ಸಮೀಪದ ತೋಟವೊಂದರಲ್ಲಿ ಜಾನುವಾರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿರತೆಯ ಬಾಯಿಗೆ ಸಿಲುಕಿದೆ ಎಂಬುದು ತಿಳಿದುಬಂದಿದೆ.
ಘಟನೆ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಬೇಟಿ ನೀಡಿ ಪರಿಶೀಲಸಿದ್ದು, ಚಿರತೆ ಓಡಾಡಿರುವು ಹೆಜ್ಜೆ ಗುರುತು ಪತ್ತೆಯಾಗಿದೆ. ಘಟನೆ ಹಿನ್ನಲೆಯಲ್ಲಿ ಗಾಂಧಿಘರ್, ಹಾಲೂರು, ಚಕ್ರಮಣಿ ಸುತ್ತಮುತ್ತಲಿನ ಗ್ರಾಮದ ಜನರು ಆತಂಕಕ್ಕೀಡಾಗಿದ್ದಾರೆ.