ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ಸಾವನ್ನಪ್ಪಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಆತೂರು ಎಂಬಲ್ಲಿ ದುರ್ಘಟನೆ.
ಇಂದು ಬೆಳಗ್ಗೆಯಿಂದ ಪ್ರಾರಂಭವಾಗಿದ್ದ ಕಾರ್ಯಾಚರಣೆ.
ಅರವಳಿಕೆ ಚುಚ್ಚುಮದ್ದು ನೀಡಿದ ನಂತರ ಓಡುತ್ತಿದ್ದ ಕಾಡಾನೆ.
ಓಡುವ ಭರದಲ್ಲಿ ಎತ್ತರದಿಂದ ಕಂದಕಕ್ಕೆ ಬಿದ್ದಿದ್ದ ಆನೆ.
ಸುಮಾರು ಮೂವತ್ತು ಅಡಿ ಎತ್ತರದಿಂದ ಎಸ್ಟೇಟ್ ಒಂದರ ಕಾಂಕ್ರೀಟ್ ಕಣಕ್ಕೆ ಬಿದ್ದಿದ್ದ ಆನೆ.
ಬಿದ್ದ ಆನೆಗೆ ದೇಹದೊಳಗೆ ಮತ್ತು ತಲೆಗೆ ಪೆಟ್ಟು ಬಿದ್ದಿರುವ ಶಂಕೆ.
ಬಿದ್ದು ಸ್ವಲ್ಪಸಮಯದ ನಂತರ ಪ್ರಜ್ಞೆಗೆ ಮರಳಿದ ಆನೆ.
ನಂತರ ಹಗ್ಗಬಿಗಿದು ಎಳೆದೊಯ್ಯುವಾಗ ಹಠಾತನೆ ಕುಸಿದು ಬಿದ್ದ ಸ್ಥಳದಲ್ಲೇ ಪ್ರಾಣ ಬಿಟ್ಟ ಮರಿಯಾನೆ.
ಸುಮಾರು 20 ವರ್ಷ ವಯಸ್ಸಿನ ಕಾಡಾನೆ. ಈ ಭಾಗದಲ್ಲಿ ತೀವ್ರ ಉಪಟಳ ನೀಡುತ್ತಿದ್ದರಿಂದ, ಜನರನ್ನು ಅಟ್ಟಿಸಿಕೊಂಡು ಬರುತ್ತಿದ್ದರಿಂದ ಸೆರೆಹಿಡಿಯಲು ಆದೇಶ ನೀಡಲಾಗಿತ್ತು.