October 5, 2024

ಕಾಡುಕೋಣ ತಿವಿದು ಕಾಫಿಬೆಳೆಗಾರ ಸಾವನ್ನಪ್ಪಿರುವ ಘಟನೆ ಕಳಸ ತಾಲ್ಲೂಕಿನ ತೋಟದೂರು ಸಮೀಪ ನಡೆದಿದೆ.

ತೋಟದೂರು ಸಮೀಪದ ಕಳಿಹಿತ್ಲು ಎಂಬಲ್ಲಿ ತಮ್ಮ ತೋಟದಲ್ಲಿದ್ದ ಸೋಮಶೇಖರ (45ವರ್ಷ) ಎಂಬುವವರು ಮೃತಪಟ್ಟವರು.

ಇಂದು ಬೆಳಿಗ್ಗೆ 10-30ರ ಸಮಯದಲ್ಲಿ ತನ್ನ ತೋಟಕ್ಕೆ ತೆರಳಿದ್ದ ಸೋಮಶೇಖರ್ ಮೇಲೆ ಕಾಡುಕೋಣ ದಾಳಿಮಾಡಿ ಕೊಂಬಿನಿಂದ ತಿವಿದಿದೆ.

ದಾಳಿಯಿಂದ ತೀವ್ರವಾಗಿ ಗಾಯಗೊಂಡು ಅತೀವ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸೋಮಶೇಖರ್ ಜಯಪುರ ನಿವಾಸಿಯಾಗಿದ್ದು ಕಳಿಹಿತ್ಲಿನ ತನ್ನ ಅಡಿಕೆ ತೋಟಕ್ಕೆ ಬಂದಿದ್ದಾಗ ಕಾಡುಕೊಣ ದಾಳಿಮಾಡಿದೆ.

ಅಪೂರ್ವ ಸೌಹಾರ್ದ ಸಹಕಾರಿ ಅಧ್ಯಕ್ಷರು ಆಗಿದ್ದ ಸೋಮಶೇಖರ್ ಈ ಭಾಗದಲ್ಲಿ ಚಿರಪರಿಚಿತರಾಗಿದ್ದರು. ಅವರ ಸಾವಿನಿಂದ ಜಯಪುರ ಭಾಗದ ಜನತೆ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

ಈ ಭಾಗದಲ್ಲಿ ಕಾಡುಕೋಣಗಳ ಹಾವಳಿ ಅತಿಯಾಗಿದ್ದು ರೈತರಿಗೆ ಅಪಾರ ಹಾನಿಯುಂಟುಮಾಡುತ್ತಿವೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ