ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮದ ಮನೆಯೊಂದರಲ್ಲಿ ಅಡಗಿದ್ದ ಬೃಹತ್ ಗಾತ್ರ ಕಾಳಿಂಗ ಸರ್ಪ ಸೆರೆಹಿಡಿಯಲಾಗಿದೆ.
ಗ್ರಾಮದ ಯಶೋಧ ಅವರ ಮನೆ ಒಳಗೆ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೇರಿಕೊಂಡಿತ್ತು.
ಕಾಳಿಂಗ ಸರ್ಪವನ್ನು ಬಣಕಲ್ ನ ಸ್ನೇಕ್ ಆರಿಫ್ ಅವರು ಸೆರೆಹಿಡಿದಿದ್ದಾರೆ. ಅರಣ್ಯ ಇಲಾಖೆ ಸುಪರ್ದಿಯಲ್ಲಿ ಕಾಡಿಗೆ ಬಿಡಲಾಗುತ್ತದೆ.
ಇತ್ತೀಚೆಗೆ ತಾನೆ ಇಲ್ಲಿಗೆ ಸಮೀಪದ ಹೇರಿಕೆ ಗ್ರಾಮದಲ್ಲಿ ಮನೆಯೊಂದರಲ್ಲಿ ಅಡಗಿದ್ದ ಕಾಳಿಂಗ ಸರ್ಪವನ್ನು ಸೆರೆಹಿಡಿದು ಅರಣ್ಯಕ್ಕೆ ಬಿಡಲಾಗಿತ್ತು.
ಸ್ನೇಕ್ ಆರೀಫ್ ರವರು ಜೀವದ ಹಂಗು ತೊರೆದು ನೀಡುತ್ತಿರುವ ಸಕಾಲಿಕ ಸೇವೆಯನ್ನು ಸಾರ್ವಜನಿಕರು ಪ್ರಶಂಸಿದ್ದಾರೆ.
ಈ ಭಾಗದಲ್ಲಿ ಕಾಳಿಂಗ ಸರ್ಪಗಳ ಸಂಖ್ಯೆ ಹೆಚ್ಚಾಗಿದ್ದು ಜನರಲ್ಲಿ ಆತಂಕ ಮೂಡಿಸುತ್ತಿವೆ