October 5, 2024

ಮಾನವತವಾದದ ಪಿತಾಮಹ ಪಂಡಿತ್ ದೀನ್ ದಯಾಳ್ ಅವರು ಮಾಡಿದ ಮಹಾನ್ ಕಾರ್ಯ ಭಾರತದ ಚರಿತ್ರೆಯಲ್ಲಿ ಅಜರಾಮರವಾಗಿದೆ ಎಂದು ಬಿಜೆಪಿ ಮುಖಂಡ ಡಿ.ಎಸ್.ಸುರೇಂದ್ರ ಹೇಳಿದರು.

ಅವರು ಬುಧವಾರ ಸಂಜೆ ಮೂಡಿಗೆರೆ ಬಿಜೆಪಿ ಪಕ್ಷದ ಕಚೇರಿಯಲ್ಲಿ ಪಂಡಿತ್ ದೀನ್ ದಯಾಳ್ ಅವರ ಜನ್ಮ ದಿನಾಚರಣೆ ಕಾರ್ಯದಲ್ಲಿ ಮಾತನಾಡಿದರು. ಪಂಡಿತ್ ದೀನ್ ದಯಾಳ್ ಅವರು ದೇಶ, ಧರ್ಮ, ಸಮಾಜಕ್ಕಾಗಿ ಹೋರಾಟ ಮಾಡಿ ಪಕ್ಷವನ್ನು ಹುಟ್ಟು ಹಾಕಲು ಕಾರಣರಾದರು. ಅಲ್ಲದೇ ಬಿಜೆಪಿ ಪಕ್ಷ ಹೆಮ್ಮರವಾಗಿ ಬೆಳೆಯಲು ಅವರು ಕೂಡ ಕಾರಣಕರ್ತರು. ಅಧಿಕಾರದ ಮದದಿಂದ ಮೆರೆಯುತ್ತಿದ್ದ ಕಾಂಗ್ರೆಸ್ ವಿರುದ್ದ ಪ್ರತಿಪಕ್ಷದ ನಾಯಕರಾದರು. ಅವರ ಆದರ್ಶ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.

ದೀಪಕ್ ದೊಡ್ಡಯ್ಯ ಮಾತನಾಡಿ, ದೀನ್ ದಯಾಳ್ ಅವರ ಅಲೋಚನೆ ಮಹತ್ವದ್ದು. ತಮ್ಮ ಜೀವನವನ್ನೇ ರಾಷ್ಟ್ರ ನಿರ್ಮಾಣಕ್ಕಾಗಿ ಮುಡಿಪಿಟ್ಟು ಪ್ರಾಣ ತ್ಯಾಗ ಮಾಡಿದರು. ಇವರ ಅಂತ್ಯೋದಯ ವಾದವೆ ಇಂದು ಮೋದಿಜಿ ಅವರ ಅತ್ಮ ನಿರ್ಭರ ಭಾರತವಾಗಿದೆ ಎಂದರು.

ಪಪಂ ಸದಸ್ಯ ಮನೋಜ್, ಮಂಡಲ ಅದ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಸರೋಜ ಸುರೇಂದ್ರ, ಪ್ರಶಾಂತ್, ಲೊಕೇಶ್, ದನಿಕ್ ಕೋಡದಿಣ್ಣೆ, ನಯನತಳವಾರ., ಪದ್ಮನಾಭ್, ಪರಿಕ್ಷಿತ್ ಜಾವಳಿ, ತಾರೇಶ್, ಸುರೇಶ್ ಶೆಟ್ಟಿ, ನಂದನ್ ಕುಂದೂರು, ಅಭಿಷೇಕ್, ಪ್ರವೀಣ್ ಬಿದರಹಳ್ಳಿ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ