October 5, 2024

ಕರಾವಳಿಯ ಉಲ್ಲಾಳದಿಂದ ಮಲೆನಾಡಿನ ಮೂಡಿಗೆರೆ ಪಟ್ಟಣಕ್ಕೆ ಆಗಮಿಸಿ ವ್ಯಾಪಾರದೊಂದಿಗೆ ಸಂಸ್ಕಾರವನ್ನು ಹೊತ್ತುಕೊಂಡು ಬಂದ ದಯಾನಂದ ನಾಯಕ್ ಅವರ ಶತಾಬ್ದಿ ವರ್ಷದ ಜನ್ಮ ಸಂಸ್ಮರಣ ಸಂಭ್ರಮಾಚರಣೆಯನ್ನು ಸೆ.23ರಂದು ಮಧ್ಯಾಹ್ನ 3 ಗಂಟೆಗೆ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜನ್ಮ ಶತಾಬ್ದಿ ಸಮಿತಿ ಅಧ್ಯಕ್ಷ ಎಂ.ಆರ್.ಜಗದೀಶ್ ಹೇಳಿದರು.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1965ರಿಂದ ಮೂಡಿಗೆರೆ ಪಟ್ಟಣದಲ್ಲಿ ವ್ಯಾಪಾರದೊಂದಿಗೆ ಸಂಸ್ಕಾರ ಮತ್ತು ಬದ್ಧತೆಯಿಂದ ಬದುಕುವುದನ್ನು ಕಲಿಸಿಕೊಟ್ಟ ಮಹಾನ್ ವ್ಯಕ್ತಿ ದಯಾನಂದ್ ನಾಯಕ್ ಅವರ ಅನುಯಾಯಿಯಾಗಿರುವ ತಾನು ಸೇರಿದಂತೆ ಮಾಜಿ ಸಭಾಪತಿಗಳಾದ ಬಿ.ಎಲ್.ಶಂಕರ್, ಡಿ.ಎಸ್.ಶಂಕರ್ ಮೂರ್ತಿ ಸೇರಿದಂತೆ ಹಲವಾರು ಪ್ರಮುಖರು ಅವರ ಗರಡಿಯಲ್ಲಿಯೇ ಬೆಳೆದಿದ್ದೇವೆ ಎಂದ ಅವರು, ದಯಾನಂದ ನಾಯಕ್ ಅವರ ಉದಾತ್ತ ವ್ಯಕ್ತಿತ್ವವನ್ನು ಇಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಮಾಜಿ ಸಭಾಪತಿಗಳಾದ ಬಿ.ಎಲ್.ಶಂಕರ್, ಡಿ.ಎಸ್.ಶಂಕರ್ ಮೂರ್ತಿ, ಜನಸೇವಾ ಟ್ರಸ್ಟ್ ನ ಕಾರ್ಯದರ್ಶಿ ಅ.ಸಾ.ನಿರ್ಮಲ್‍ಕುಮಾರ್, ಕನ್ನಡ ಪೂಜಾರಿ ಹಿರೆಮಗಳೂರು ಕಣ್ಣನ್ ಭಾಗವಹಿಸಲಿದ್ದಾರೆಂದು ಹೇಳಿದರು.

ಕಾಫಿ ಬೆಳೆಗಾರ ಕೆಂಜಿಗೆ ಕೇಶವ್ ಮಾತನಾಡಿ, ದಯಾನಂದ್ ನಾಯಕ್ ಮಾರಾಟ ಮಾಡುತ್ತಿದ್ದ ಗೊಬ್ಬರ ಮತ್ತು ಕೀಟನಾಶಕ ಕಳಪೆಯಾಗಿದೆ ಎಂದು ಇದೂವರೆಗೂ ಯಾವ ರೈತರೂ ಹೇಳಿಲ್ಲ. ವ್ಯಾಪಾರದಲ್ಲಿ ಗುಣಮಟ್ಟ ಕಾಯ್ದಿರಿಸಿಕೊಳ್ಳುವ ಜತೆಗೆ ಪಾರದರ್ಶಕವಾದ ವ್ಯಾಪಾರ ಮಾಡುತ್ತಿದ್ದರು. ಅಲ್ಲದೇ ವಿವಿಧ ಸಂಘಟನೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಅವರ ಹಿತ ನುಡಿಗಳು ಇಂದಿಗೂ ಯುವ ಜನಾಂಗಕ್ಕೆ ಪ್ರೇರಣೆಯಾಗಿದೆ. ಅಂತವರನ್ನು ನೆನೆಯುವ ಸಲುವಾಗಿ ತಾಲೂಕಿನ ಎಲ್ಲಾ ಪಕ್ಷ, ಸಂಘ ಸಂಸ್ಥೆ, ಬೆಳೆಗಾರರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಮನವಿ ಮಾಡಿದ ಅವರು, ಕಾರ್ಯಕ್ರಮದಲ್ಲಿ ನಾಯಕರ ಪತ್ನಿ ಸುಮತಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.

ಸಮಿತಿಯ ಬಿ.ಎನ್. ಮನಮೋಹನ್, ಕೆ.ಪಿ.ಸುಂದ್ರೇಶ್, ಸುದೇವ್ ಗುತ್ತಿ, ಪರೀಕ್ಷಿತ್ ಜಾವಳಿ, ಜನಾರ್ಧನ್‍ಶೆಟ್ಟಿ, ಜಗದೀಪ್, ವಿವೇಕ್‍ನಾಯಕ್ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ