October 5, 2024

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಹಿರಿಯ ನೇತಾರ, ಸಿಪಿಐಎಂನ ಪ್ರಧಾನ ಕಾರ್ಯದರ್ಶಿ, ಮಾಜಿ ಸಂಸದ  ಸೀತಾರಾಮ್ ಯೆಚೂರಿ (72 ವರ್ಷ)  ನಿಧನರಾಗಿದ್ದಾರೆ.

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯಚೂರಿಯವರನ್ನು ದೆಹಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಗೆ ದಾಖಲಿಸಲಾಗಿತ್ತು.

1952ರ ಆಗಸ್ಟ್ 12ರಂದು ಚೆನ್ನೈನಲ್ಲಿ ಜನಿಸಿದ ಯೆಚೂರಿ, ಬಳಿಕ 1969ರ ತೆಲಂಗಾಣ ಆಂದೋಲನದ ಬಳಿಕ ದೆಹಲಿಗೆ ತೆರಳಿದರು. ಯೆಚೂರಿ ಹತ್ತನೇ ತರಗತಿಯವರೆಗೆ ಹೈದರಾಬಾದ್‌ನ ಆಲ್ ಸೇಂಟ್ಸ್ ಹೈಸ್ಕೂಲ್‌ನಲ್ಲಿ ಅಧ್ಯಯನ ಮಾಡಿದ್ದು, ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದರು.

ಎಡಪಂಥೀಯ ಚಿಂತೆನೆಗಳಿಂದ ಪ್ರಭಾವಿತರಾಗಿ 1974ರಲ್ಲಿ ಎಸ್‌ಎಫ್‌ಐ(ಸ್ಟುಡೆಂಟ್ ಫೆಡರೇಷನ್ ಆಪ್ ಇಂಡಿಯಾ) ಮೂಲಕ ವಿದ್ಯಾರ್ಥಿ ಚಳುವಳಿಗೆ ಧುಮುಕಿದ ಯೆಚೂರಿ ಅವರ ರಾಜಕೀಯ ಜೀವನವು ಇದಾದ ಒಂದೇ ವರ್ಷದಲ್ಲಿ ಆರಂಭವಾಗಿದೆ.

2005ರಿಂದ 2017ರವರೆಗೆ ಪಶ್ಚಿಮ ಬಂಗಾಳದಲ್ಲಿ ಸಂಸದ ಮತ್ತು ರಾಜ್ಯಸಭಾ ಸದಸ್ಯರಾಗಿದ್ದರು. 2022ರಲ್ಲಿ ಸತತ ಮೂರನೇ ಬಾರಿಗೆ ಸಿಪಿಐಎಂ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು.

ಮೋದಿ ಗವರ್ನ್‌ಮೆಂಟ್: ನ್ಯೂ ಸರ್ಜ್ ಆಫ್ ಕಮ್ಯೂನಲಿಸಂ, ಗ್ಲೋಬಲ್ ಎಕಾನಮಿಕ್ ಕ್ರೈಸಿಸ್: ಮಾರ್ಕ್ಸಿಸ್ಟ್ ಪರ್ಸ್‌ಪೆಕ್ಟಿವ್, ವಾಟ್ ಇಸ್ ಹಿಂದೂ ರಾಷ್ಟ್ರ ಸೇರಿದಂತೆ ಹಲವಾರು ಪುಸ್ತಕಗಳನ್ನು  ಸೀತಾರಾಮ್ ಯೆಚೂರಿ ಬರೆದಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ