ಗೌರಿ ಗಣೇಶ ಹಬ್ಬದ ಪ್ರಯುಕ್ತ ಮೂಡಿಗೆರೆ ತಾಲ್ಲೂಕಿನ ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಚತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿಶಿಷ್ಟವಾಗಿ ಹಬ್ಬವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿಧಿಗಳು ಸಿಬ್ಬಂದಿಗಳು ಸೇರಿದಂತೆ ಸೇವಭಾರತಿ ಸಂಘದ ಸದಸ್ಯರು ಮತ್ತು ವಿವಿಧ ಮಹಿಳಾ ಸಂಘಗಳ ಸಕ್ರೀಯ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ್ ಮತ್ತು ಡಾ.ನವೀನ್ ಆವರು ಚಾಲನೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಂ ಆಶ್ರಿತ್ ಗೌಡ ಮಾತನಾಡಿ ‘ಗ್ರಾಮದ ಸಮುದಾಯ ಭವನದಲ್ಲಿ ಗ್ರಾಮದ ಸ್ನೇಹಿತರು ಸೇರಿ ಗಣಪತಿ ಪ್ರತಿಷ್ಠಾಪಿಸಿದ್ದೇವೆ.ಈ ಹಬ್ಬವನ್ನು ವಿಶೇಷವಾಗಿ ಆಚರಿಸುವ ಸಲುವಾಗಿ ಭಾರತೀಬೈಲ್,ಕನ್ನಗೆರೆ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡಿದ್ದೇವೆ. ಅದೇ ಗ್ರಾಮದಲ್ಲಿ ಸ್ನೇಹಿತರ ಸಹಾಯದಿಂದ ಬಸ್ ಸ್ಟಾಪ್ ಗಳಿಗೆ ಬಣ್ಣ ಹೊಡೆಯುವುದು ಸೇರಿದಂತೆ ದುರಸ್ತಿ ಕಾರ್ಯವನ್ನು ಮಾಡಿದ್ದೇವೆ’ಎಂದರು.
ಗ್ರಾಮಸ್ಥರಾದ ಎಚ್.ಜಿ ಆದರ್ಶ್ , ರವಿ ಶಂಕರ್, ಶಶಿಕಾಂತ್,ಚಂದ್ರ ಶೇಖರ್,ರಮೇಶ್,ಧ್ರುವ, ಧನಂಜಯ,ಹರೀಶ್, ಸದನ್, ಪ್ರತಾಪ್.ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ಗ್ರಾಮಸ್ಥರು ಇದ್ದರು.