ವಿಶ್ವ ಹಿಂದೂ ಪರಿಷದ್ ಬಜರಂಗದಳ ಮೂಡಿಗೆರೆ ವತಿಯಿಂದ ವಿಶ್ವ ಹಿಂದೂ ಪರಿಷದ್ ಷಷ್ಠಿ ಪೂರ್ತಿ ಸಂಭ್ರಮ ಸಮಾರೋಪ ಕಾರ್ಯಕ್ರಮ ಹಾಗೂ ಕೃಷ್ಣ ವೇಷ ಸ್ಪರ್ಧೆ ಮೂಡಿಗೆರೆ ಪಟ್ಟಣದ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ನಡೆಯಿತು.
ಕೃಷ್ಣವೇಷ ಸ್ಪರ್ಧೆಯಲ್ಲಿ ಪುಣಾಣಿ ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು. ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸಹ ಕಾರ್ಯದರ್ಶಿ ವಿನಯ್ ಶೆಟ್ಟಿ. ಜಿಲ್ಲಾ ಸಹ ಸಂಯೋಜಕರು ಅಭಿ ಬಣಕಲ್. ವಿಶ್ವ ಹಿಂದೂ ಪರಿಷದ್ ಮೂಡಿಗೆರೆ ಅಧ್ಯಕ್ಷರು ಸಾಲುಮರ ಮಹೇಶ್. ಜಿಲ್ಲಾ ಗೋ ರಕ್ಷಾ ಪ್ರಮುಖ್ ಅಜಿತ್ ಜೇನ್ ಬೈಲ್. ತಾಲ್ಲೂಕು ಸಹ ಸಂಯೋಜಕರು ಸಂತೋಷ್ ಶುಭ ನಗರ. ಸಹ ಸಂಯೋಜಕರು ಪ್ರಣೀತ್. ಮೂಡಿಗೆರೆ ನಗರ ಸಂಯೋಜಕರು ಧನು. ಪ್ರಖಂಡ ಸತ್ಸಂಗ ಪ್ರಮುಖ್ ರಂಜಿತ್.ಬಜರಂಗದಳ ಕಾರ್ಯಕರ್ತರು. ಪರಿವಾರದ ಮುಖಂಡರುಗಳು ಉಪಸ್ಥಿತರಿದ್ದರು.