ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನ ರಾಜೇಂದ್ರ ಭವನದಲ್ಲಿ , ಕೇಂದ್ರೀಯ ಪಠ್ಯಕ್ರಮವನ್ನು ಬೋಧಿಸುವ ಶಾಲೆಗಳ ಪೈಕಿ ಕನ್ನಡ ವಿಷಯದಲ್ಲಿ ವಿಶೇಷವಾಗಿ ಸಾಧನೆಗೈದ ಕನ್ನಡ ಶಿಕ್ಷಕರಿಗೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಪರೀಕ್ಷಾ ಸ್ಫೂರ್ತಿ ಫೌಂಡೇಶನ್ ಇವರ ಸಹಯೋಗದಲ್ಲಿ ರಾಜ್ಯ ಮಟ್ಟದ ಶಿಕ್ಷಕ ಸಾಧಕ ರತ್ನ ಪ್ರಶಸ್ತಿಯನ್ನು ವಿತರಿಸಲಾಯಿತು.
ಚಿಕ್ಕಮಗಳೂರು ಸಾಯಿ ಏಂಜೆಲ್ಸ್ ಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಸಂದೀಪ್ ಹೊಸಕೆರೆ ಇವರು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಂದೀಪ್ ಅವರು ಮೂಡಿಗೆರೆ ತಾಲ್ಲೂಕಿನ ಹೊಸಕೆರೆ ಗ್ರಾಮದವರಾಗಿದ್ದು, ಕನ್ನಡ ಭಾಷಾ ಶಿಕ್ಷಕರಾಗಿ ಪ್ರಸ್ತುತ ಚಿಕ್ಕಗಳೂರಿನ ಪ್ರತಿಷ್ಠಿತ ಸಾಯಿ ಏಂಜೆಲ್ಸ್ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂದೀಪ್ ಅವರಿಗೆ ಶ್ರೀ ಸಾಯಿ ಏಂಜೆಲ್ಸ್ ಶಾಲೆ ಸಂಸ್ಥಾಪಕರಾದ ಶ್ರೀಮತಿ ವಿಜಯ ನಾಗೇಶ್ , ಪ್ರಾಂಶುಪಾಲರಾದ ಶ್ರೀಮತಿ ಯಾಮಿನಿ ಸವೂರ್ , ಜಂಟಿ ಕಾರ್ಯದರ್ಶಿ ಎಂ ಜೆ ಕಾರ್ತಿಕ್ , ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಗೀತಾಂಜಲಿ ಹಾಗೂ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪರೀಕ್ಷಾ ಸ್ಪೂರ್ತಿ ಫೌಂಡೇಶನ್ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.