ಮೂಡಿಗೆರೆ ಜೇಸಿಐ ಘಟಕವು ವಲಯಮಟ್ಟದ ಅಭಿವೃದ್ಧಿ ಮತ್ತು ಬೆಳವಣಿಗೆ(ಜಿ ಅಂಡ್ ಡಿ) ವಿಭಾಗದಲ್ಲಿ ಅತ್ಯುತ್ತಮ ಸಾಧನೆಗಾಗಿ ಪ್ರಥಮ ಸ್ಥಾನವನ್ನು ಪಡೆದಿದೆ.
ಬಾಳೆಹೊನ್ನೂರಿನಲ್ಲಿ ಭಾನುವಾರ ಜೆಸಿಐ ವಲಯ ಮಟ್ಟದ ಸಾಮಾಜಿಕ ಅಭಿವೃದ್ಧಿ ಹಾಗೂ ಬೆಳವಣಿಗೆ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಮೂಡಿಗೆರೆ ಜೇಸಿಐ ಘಟಕಕ್ಕೆ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ಪ್ರಥಮ ಸ್ಥಾನದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಜೇಸಿಐ ಭಾರತದ ಅಧ್ಯಕ್ಷರಾದ ರೀಕೆಜ್ ಶರ್ಮ ರವರು ಮೂಡಿಗೆರೆ ಜೆ ಸಿ ಅಧ್ಯಕ್ಷರಾದ ಸುಪ್ರಿತ್ ರವರಿಗೆ ಜಿ ಅಂಡ್ ಡಿ ಟ್ರೋಪಿಯನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಜೇಸಿಐ ವಲಯಾಧ್ಯಕ್ಷರಾದ ಆಶಾ ಜೈನ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮೂಡಿಗೆರೆಯ ಜೇಸಿಐ ಸಂಸ್ಥೆಯ ಪೂರ್ವಾಧ್ಯಕ್ಷರುಗಳಾದ ಎಂ ಡಿ ವಿಜಯಕುಮಾರ್, ಚಂದ್ರಶೇಖರ್ ಕೆ.ಹೆಚ್., ರತೀಶ್ ಬಿ.ಎನ್. ಸದಸ್ಯರಾದ ಮಹಮ್ಮದ್ಇರ್ಷಾದ್, ದಿವ್ಯ ಸುಪ್ರೀತ್, ಪ್ರೇಮ ಪುಣ್ಯ ಮೂರ್ತಿ, ವಿಶ್ವಕುಮಾರ್, ಪ್ರದೀಪ್ ಕೆಕೆ, ಪಿ.ಕೆ. ಹಮೀದ್, ಸುದೀಪ್ ತ್ರಿಪುರ, ಪ್ರಶಾಂತ್ ಬಿದ್ರಹಳ್ಳಿ, ಸೃಷ್ಟಿ, ವಿಶ್ವ ಮುಗ್ರಹಳ್ಳಿ, ರಾಜು ಎಸ್ ಪಿ, ಸುನಿಲ್ , ಅಕ್ಷತ್ ಪಟ್ಟದೂರು, ಶ್ರುತಿ ಸಂಪತ್ ಮುಂತಾದವರು ಭಾಗವಹಿಸಿದ್ದರು.