ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಮೂಡಿಗೆರೆ ವತಿಯಿಂದ ದಿನಾಂಕ 17/08/2024/ ರ ಶನಿವಾರ *ಶ್ರಾವಣ ಸಂಜೆ* ಕಾರ್ಯಕ್ರಮ ಅಧ್ಯಕ್ಷರಾದ ಡಿ. ಕೆ. ಲಕ್ಷ್ಮಣಗೌಡರ ಪುನರ್ವಿ ನಿಲಯದಲ್ಲಿ ನೆರವೇರಿತು.
ಈ ಸಮಾರಂಭಕ್ಕೆ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಆಗಮಿಸಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜೂನಿಯರ್ ಕಾಲೇಜ್ ಪ್ರಾಂಶುಪಾಲರಾದ ಡಾ.ಜಗದೀಶ್ ನಾಯಕ್ ಅವರು ಶ್ರಾವಣ ಸಂಜೆ ವಿಶೇಷಯದ ಬಗ್ಗೆ *ಉಪನ್ಯಾಸ* ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಡಿ. ಕೆ ಲಕ್ಷ್ಮಣಗೌಡ ವಹಿಸಿಕೊಂಡಿದ್ದರು.
ಬಣಕಲ್. ಗೋಣಿಬೀಡು, ಕಸಬಾ ಹೋಬಳಿ ಘಟಕದ ನಿಯೋಜಿತ ಅಧ್ಯಕ್ಷರುಗಳು ಮತ್ತು ತಾಲ್ಲೂಕು ಪದಾಧಿಕಾರಿಗಳು ಮತ್ತು ಹೋಬಳಿ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮೂಡಿಗೆರೆ ತಾಲೂಕಿನಿಂದ ಡ್ಯಾನ್ಸ್ ವಿಭಾಗದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಮಾಸ್ಟರ್ ಕಿಶೋರ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಅಭಿಮಾನಿಗಳಿಗೆ ಗಣ್ಯರಿಗೂ ಶ್ರಾವಣ ಸಂಜೆ ವಿಶೇಷ ಸವಿ ಭೋಜನ ನೀಡಲಾಯಿತು.