ಲಯನ್ಸ್ ಕ್ಲಬ್ ಬಾಳೆಹೊನ್ನೂರು ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಬಾಳೆಹೊನ್ನೂರು ಲಯನ್ಸ್ ವೃತ್ತದಲ್ಲಿ ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಕೃಷಿ ಮಾಹಿತಿ ಶಿಬಿರ ವನ್ನು ಬನ್ನೂರಿನ ‘ ಭದ್ರಾ ಜಂಗಲ್ ರಿಟ್ರೀಟ್’ ರೆಸಾರ್ಟ್ ನಲ್ಲಿ ಏರ್ಪಡಿಸಲಾಗಿತ್ತು.
ಬಾಳೆಹೊನ್ನೂರು ಲಯನ್ಸ್ ಕ್ಲಬ್ ಅಧ್ಯಕ್ಷ ಎಂವಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದು , ಕಾರ್ಯದರ್ಶಿ ಎಂ.ನಾರಾಯಣ ರವರು ಕಾರ್ಯಕ್ರಮ ನಿರೂಪಿಸಿದರು , ಖಜಾಂಚಿ ಶರತ್ ಕುಮಾರ್ ರವರು ರಸಗೊಬ್ಬರ ನಿರ್ವಹಣೆ ಬಗ್ಗೆ ವಿವರಿಸಿದರು. ಪ್ರಗತಿಪರ ಕೃಷಿಕರಾದ ಮಡ್ಡಿಕೆರೆ ನಾಗೇಶ್ ಗೌಡರು ಕಾಫಿ ಅಡಿಕೆ ಮತ್ತು ಭತ್ತ ಬೆಳೆಯುವ ಬಗ್ಗೆ ಮತ್ತು ಲಯನ್ ಮಧುಕುಮಾರ್ ರವರು ಕಾಳು ಮೆಣಸಿನ ಹೊಸತಳಿ ಹಾಗೂ ನೀರು ನಿರ್ವಹಣೆ ಬಗ್ಗೆ ನೂತನ ವಿಧಾನಗಳ ಬಗ್ಗೆ ಸದಸ್ಯರಿಗೆ ತಿಳುವಳಿಕೆ ನೀಡಿದರು .
ಲಯನ್ಸ್ ಸೇವಾ ಸಂಸ್ಥೆಯ ಪೂರ್ವಾಧ್ಯಕ್ಷರುಗಳಾದ ಎಂ ಆರ್ ಮಂಜುನಾಥ್, ಸುಬ್ರಹ್ಮಣ್ಯ, ಎ.ಸಿ.ಕೃಷ್ಣಮೂರ್ತಿ ಮತ್ತು ಎಂ.ಡಿ.ಶಿವರಾಂ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಮಡ್ಡೀಕೆರೆ ನಾಗೇಶ್ ಗೌಡ ಅವರನ್ನು ಲಯನ್ಸ್ ಸಂಸ್ಥೆ ವತಿಯಿಂದ ಗೌರವಿಸಲಾಯಿತು.
ಭದ್ರಾ ಜಂಗಲ್ ರಿಟ್ರೀಟ್ ಮಾಲೀಕರಾದ, ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಯೋಗೇಶ್ ಗೌಡರು ಕಾರ್ಯಕ್ರಮ ಆಯೋಜಿಸಿದ್ದರು.