ನಮ್ಮ ಭಾರತ ದೇಶ ಆಗಸ್ಟ್ 15ರಂದು ತನ್ನ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿದೆ. ದೇಶದೆಲ್ಲೆಡೆ ಜನ ಸ್ವಾತಂತ್ರೋತ್ಸವದ ಸಂಭ್ರಮವನ್ನು ಸವಿದಿದ್ದಾರೆ. ಹರ್ ಘರ್ ತಿರಂಗ, ಮನೆ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಬೇಕೆಂಬ ದೇಶದ ಪ್ರಧಾನಿಯವರ ಆಶಯದಂತೆ ಕೋಟ್ಯಾಂತರ ಮಂದಿ ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಸಂಭ್ರಮಿಸಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಪಲ್ಗುಣಿ ಗ್ರಾಮದಲ್ಲಿ ಹಿರಿಯ ದಂಪತಿಗಳಾದ ಸಹಕಾರಿ ಧುರೀಣ, ಕಾಫಿ ಬೆಳೆಗಾರ ಓ.ಎಸ್. ಗೋಪಾಲಗೌಡ ಮತ್ತು ಅವರ ಪತ್ನಿ ತಮ್ಮ ಮನೆಯೆದುರು ರಾಷ್ಟ್ರಧ್ವಜ ಹಾರಿಸಿ ಧ್ವಜವಂದನೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ತೊಂಬತ್ತರ ಹರೆಯದ ದಂಪತಿಗಳು ರಾಷ್ಟ್ರಧ್ವಜಾರೋಹಣದಲ್ಲಿ ಭಾಗವಹಿಸಿ ತಮ್ಮ ದೇಶಪ್ರೇಮವನ್ನು ಮೆರೆದು ಗಮನ ಸೆಳೆದಿದ್ದಾರೆ. ಅವರ ಪುತ್ರ ಮೂಡಿಗೆರೆ ಪಿ ಸಿ ಎ ಆರ್ ಡಿ ಬ್ಯಾಂಕ್ ಉಪಾಧ್ಯಕ್ಷ ಓ.ಜಿ. ರವಿಯವರು ಸಹ ಈ ಸಂದರ್ಭದಲ್ಲಿ ಜೊತೆಗಿದ್ದರು.