ನಾವು ನಮ್ಮ ಪರಿಸರದ ಸ್ವಚ್ಚತೆ ಕಾಪಾಡಿದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ ‘ಎಂದು ಮಲೆನಾಡು ಗ್ಯಾರೇಜ್ ಹಾಗೂ ಕಾರ್ಮಿಕರ ಸಂಘದ ಅಧ್ಯಕ್ಷ ರವಿ ಪೂಜಾರಿ ಹೇಳಿದರು.
ಅವರು ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೇಟೆಯಲ್ಲಿ ಮಲೆನಾಡು ಗ್ಯಾರೇಜ್ ಮಾಲೀಕರು ಹಾಗೂ ಕಾರ್ಮಿಕರ ಸಂಘದ ವತಿಯಿಂದ ಆಯೋಜಿಸಿದ್ದ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕು. ಗ್ರಾಮಗಳು ಸ್ವಚ್ಛಚವಾದರೆ ದೇಶವೇ ಸ್ವಚ್ಚವಾದಂತೆ. ಆದ್ದರಿಂದ ನಾಗರಿಕರಾದ ನಾವು ನಮ್ಮ ಪರಿಸರವನ್ನು ಸ್ವಚ್ಚವಾಗಿ ಇಡಬೇಕು’ಎಂದರು.ಬಣಕಲ್ ಪೇಟೆಯ ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಚ ಮಾಡುವ ಮೂಲಕ ಶ್ರಮದಾನ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಇಮ್ದಾದ್,ಕಾರ್ಯದರ್ಶಿ ಈಶ್ವರ್,ಖಜಾಂಚಿ ಇಮ್ರಾನ್,ಮತ್ತು ಸರ್ವ ಸದಸ್ಯರು ಇದ್ದರು.