ಮೂಡಿಗೆರೆ ಪಟ್ಟಣದ ಬೆಳೆಗಾರರ ಸಂಘದ ಆವರಣದಲ್ಲಿ ಬೆಳೆಗಾರ ಸಂಘ ಮತ್ತು ಟೈಲರ್ ಸಂಘಟನೆ ಮುಖಂಡರು 78 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬೆಳೆಗಾರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಮಾತನಾಡಿ ; ನಮ್ಮ ಹಿರಿಯರು ತಮ್ಮ ತ್ಯಾಗ ಬಲಿದಾನದಿಂದ ದೊರಕಿಸಿಕೊಟ್ಟಿರುವ ಸ್ವಾತಂತ್ರ್ಯವನ್ನು ಅಷ್ಟೇ ಜತನದಿಂದ ಕಾಯ್ದು ದೇಶವನ್ನು ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ದೇಶಪ್ರೇಮವನ್ನು ಬೆಳೆಸಿಕೊಂಡು ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕಬೇಕು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ, ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್, ಬೆಳೆಗಾರರ ಸಂಘದ ರೇವಣ್ಣಗೌಡ, ಉದ್ಯಮಿ ಮೋಹನ್ ಲಾಲ್ ಜೈನ್, ಟೈಲರ್ಸ್ ಸಂಘದ ಅಧ್ಯಕ್ಷ ಹೆಚ್.ಎಂ. ಶಿವೇಗೌಡ, ಉಪಾಧ್ಯಕ್ಷ ಷಣ್ಮುಖಾನಂದ, ಕಾರ್ಯದರ್ಶಿ ಸತೀಶ್, ಸಹಕಾರ್ಯದರ್ಶಿ ಪ್ರಕಾಶ್, ನರಸಿಂಹ, ಗಿರೀಶ್, ಬಸವರಾಜು, ಪೂರ್ಣೆಶ್, ಉಮಾ, ತೀರ್ಥ, ಪ್ರದೀಪ್, ರೇವಣ್ಣ, ಕೇಶವ್, ದಯಾಕರ, ಗೋಪಾಲ್, ಮಂಜುಳ, ಬ್ರಿಜೇಶ್ ಮತ್ತಿತರರಿದ್ದರು.