ದಲಿತ ಸೇನೆ ಸಂಘಟನೆ ಇಂದ ಚಿಕ್ಕಮಗಳೂರು ಜಿಲ್ಲಾ ಸಮಿತಿ ಹಾಗೂ ಕಡೂರು ತಾಲ್ಲೂಕು ಸಮಿತಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಶನಿವಾರ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ್ ಜಿ ಏಳಸಂಗಿ ಹಾಗೂ ರಾಜ್ಯ ಉಪಾಧ್ಯಕ್ಷ ಮೆಹಬೂಬ್ ಸಿಂದಗಿಕರ್ ಹಾಗೂ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರ ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ಕಡೂರು ತಾಲ್ಲೂಕು ಸಮಿತಿಯ ಅಧ್ಯಕ್ಷರನ್ನಾಗಿ ಮನೋಜ್ ಕುಮಾರ್ ಎಸ್ ರವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಯಿತು.
ತಾಲ್ಲೂಕು ಉಪಾಧ್ಯಕ್ಷರಾಗಿ ಅಣ್ಣಪ್ಪನಾಯ್ಕ ಪ್ರಧಾನ ಕಾರ್ಯದರ್ಶಿ ಯಾಗಿ ರವಿಕುಮಾರ್ ತಾಲ್ಲೂಕು ಖಜಾಂಚಿ ಯಾಗಿ ಪ್ರದೀಪ್ ತಾಲ್ಲೂಕು ಸಂಚಾಲಕರಾಗಿ ಮಂಜುನಾಥ್ ಕಡೂರು ನಗರ ಅಧ್ಯಕ್ಷರಾಗಿ ಲೋಹಿತ್ ಕುಮಾರ್ ಹಾಗೂ ಬೀರೂರು ನಗರ ಅಧ್ಯಕ್ಷರು ಆಗಿ ಸುನೀಲ್ ಬೀರೂರು ನಗರ ಉಪಾಧ್ಯಕ್ಷರಾಗಿ ಹೇಮಂತ್ ಕಡೂರು ತಾಲ್ಲೂಕು ಯುವಘಟಕದ ಅಧ್ಯಕ್ಷರಾಗಿ ಉಮೇಶ್ ನಾಯ್ಕ ಯುವಘಟಕದ ಉಪಾಧ್ಯಕ್ಷರಾಗಿ ಪ್ರಶಾಂತ್ ನಾಯ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ದಾಮೋದರ್ ರವರನ್ನು ಆಯ್ಕೆ ಮಾಡಲಾಯಿತು