ಅಸ್ಸಾಂನ ಗುಹವಾಟಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಪೊಲೀಸ್ ಇಲಾಖೆಯ ಜೂಡೋ ಕ್ಲಸ್ಟರ್ ವಿಭಾಗದ ಪೆಂಕಾಕ್ ಸಿಲತ್ ಕ್ರೀಡಾಕೂಟದ ಗಾಂಡ ವಿಭಾಗದಲ್ಲಿ ಸತತ 2ನೇ ಬಾರಿಗೆ ಟಿ,ಎಸ್.ಗಿರೀಶ್ ಸಿವಿಲ್ ಹೆಡ್ ಕಾನ್ಸ್ಟೇಬಲ್ ಬಸವನಹಳ್ಳಿ ಪೊಲೀಸ್ ಠಾಣೆ ಚಿಕ್ಕಮಗಳೂರು ಜಿಲ್ಲೆಯ ಪೋಲಿಸ್ ಇಲಾಖೆಯ ಇವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ತಂಡದಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದಿರುತ್ತಾರೆ.
ಹಲವಾರು ವರ್ಷಗಳಿಂದ ಇವರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅನೇಕ ಪದಗಳನ್ನು ಪಡೆದಿರುವ ವಿಶೇಷ ಕ್ರೀಡಾ ಪ್ರತಿಭೆಯಾಗಿರುತ್ತಾರೆ. ಇವರು ಕ್ರೀಡೆಯಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದು ಇವರ ಗರಡಿಯಲ್ಲಿ ಬೆಳೆದ ಚಿಕ್ಕಮಗಳೂರಿನ ಅನೇಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ರಾಷ್ಟ್ರಮಟ್ಟ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಪಡೆದು ತಮ್ಮ ಕ್ರೀಡಾ ಭವಿಷ್ಯವನ್ನು ರೂಪಿಸಲು ವಿಶೇಷವಾದ ತರಬೇತಿಯನ್ನು ನೀಡಿದ್ದಾರೆ.
ಡಿಜಿ ಅಂಡ್ ಐಜಿ ಅಲೋಕ್ ಮೋಹನ್ ಐಪಿಎಸ್ . ಹಾಗೂ ಎಡಿಜಿಪಿ ಉಮೇಶ್ ಕುಮಾರ್ ಅಖಿಲ ಭಾರತೀಯ ಪೊಲೀಸ್ ಕ್ರೀಡಾಕೂಟದಲ್ಲಿ ಎರಡನೇ ಬಾರಿ ಕಂಚಿನ ಪದಕ ತಂದ ಟಿ.ಎಸ್. ಗಿರೀಶ್ ಅವರನ್ನು ಪೊಲೀಸ್ ಪ್ರಧಾನ ಮುಖ್ಯ ಕಚೇರಿ ಬೆಂಗಳೂರಿನಲ್ಲಿ ವಿಶೇಷವಾಗಿ ಅಭಿನಂದಿಸಿದ್ದಾರೆ