ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಮೂಡಿಗೆರೆ ಘಟಕದ ನೂತನ ಅಧ್ಯಕ್ಷರಾಗಿ ಹಿರಿಯ ಕಾಫಿ ಬೆಳೆಗಾರ ಬಿ. ಬಸವರಾಜು ಅಧಿಕಾರ ವಹಿಸಿಕೊಂಡಿದ್ದಾರೆ.
ಶನಿವಾರ ಮೂಡಿಗೆರೆ ಕ್ಲಬ್ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಅಧ್ಯಕ್ಷರಾದ ಎನ್.ಎಲ್. ಪುಣ್ಯಮೂರ್ತಿ ಅವರು ನೂತನ ಅಧ್ಯಕ್ಷ ಬಿ.ಬಸವರಾಜು ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಘಟಕದ ಕಾರ್ಯದರ್ಶಿಯಾಗಿ ಹೆಚ್.ಆರ್. ಪ್ರದೀಪ್ ಕುಮಾರ್ ದುಂಡುಗ, ಖಜಾಂಚಿಯಾಗಿ ಬಿ.ಎನ್. ಮನಮೋಹನ್, ಉಪಾಧ್ಯಕ್ಷರಾಗಿ ಹಾಲೂರು ರವಿ, ಕೆ.ಎಲ್.ಎಸ್. ತೇಜಸ್ವಿ, ವಿಜಯ್ ಕುಮಾರ್, ವಿನೋದ್ ಕುಮಾರ್ ಶೆಟ್ಟಿ, ರವಿಕುಮಾರ್, ನಯನ ಕಣಚೂರು, ಕೆ.ಎನ್.ರವಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಸೀನಿಯರ್ ಛೇಂಬರ್ ರಾಜ್ಯ ಅಧ್ಯಕ್ಷರಾಗಿದ್ದ ಮತ್ತು ಜೇಸಿಐ ಮಾಜಿ ರಾಜ್ಯಾಧ್ಯಕ್ಷ ಎಂ.ಆರ್. ಜಯೇಶ್ ಭಾಗವಹಿಸಿದ್ದರು.
ಮುಖ್ಯ ಭಾಷಣಕಾರರಾಗಿ ಕನ್ನಡ ಉಪನ್ಯಾಸಕ ಸತ್ಯನಾರಾಯಣ ಮಾತನಾಡಿದ ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಿರುವ ಅನೇಕ ಸಂಘ ಸಂಸ್ಥೆಗಳು ಸಮಾಜದ ಏಳಿಗೆಗೆ ಎಲೆಮರೆಯ ಕಾಯಿಯಂತೆ ದುಡಿಯುತ್ತಿವೆ. ಯಾವುದೇ ಫಲಾಪೇಕ್ಷೆ ಇಲ್ಲದೇ ತಮ್ಮ ಸ್ವಂತ ದುಡಿಮೆಯ ಹಣವನ್ನು ವಿನಿಯೋಗಿಸಿ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲರೂ ಅಭಿನಂದನೆಗೆ ಅರ್ಹರು. ಸೇವೆ ಎಂಬುದು ನಮ್ಮ ಭಾರತೀಯ ಪರಂಪರೆಯಲ್ಲಿ ಹಾಸುಹೊಕ್ಕಾಗಿ ಬಂದಿದೆ ಎಂದು ಅಭಿಪ್ರಾಯಿಸಿದರು.
ಈ ಸಂದರ್ಭದಲ್ಲಿ ಸೀನಿಯರ್ ಛೇಂಬರ್ ಸದಸ್ಯರಾದ ಡಾ. ರಾಮಚರಣ ಅಡ್ಯಂತಾಯ, ದೀಪಕ್ ದೊಡ್ಡಯ್ಯ, ಬಿ.ಕೆ. ಜಗಮೋಹನ್, ಹೆಚ್.ಸಿ. ಚಂದ್ರಕಾಂತ್, ಅರುಣ್ ಸಾಲ್ದಾನ ಮುಂತಾದವರು ಇದ್ದರು.