ಜೇಸಿಐ ಹಿರಿಯ ಸದಸ್ಯರ ಅಲ್ಯೂಮಿನಿ ಕ್ಲಬ್ ವಲಯ 14 ರ ಪ್ರಾದೇಶಿಕ ಸ್ನೇಹ ಸಮ್ಮೇಳನ ಮೇ25ರಂದು ಶನಿವಾರ ಮೂಡಿಗೆರೆ ತಾಲ್ಲೂಕಿನ ಜನ್ನಾಪುರ ಗವಿಕಲ್ ಕ್ಲಬ್ ನಲ್ಲಿ ನಡೆಯಿತು.
ಸಮ್ಮೇಳನದಲ್ಲಿ ವಲಯ 14ರ ವಿವಿಧ ಘಟಕಗಳ ಅಲ್ಯುಮಿನಿ ಕ್ಲಬ್ ಸದಸ್ಯರು, ಪದಾಧಿಕಾರಿಗಳು ಭಾಗವಹಿಸಿದ್ದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಅಲ್ಯೂಮಿನಿ ಕ್ಲಬ್ ವಲಯ ಉಪಾಧ್ಯಕ್ಷರಾದ ಮೂಡಿಗೆರೆ ಜೇಸಿಐ ಮಾಜಿ ಅಧ್ಯಕ್ಷ ಹೆಚ್.ಕೆ. ಯೋಗೇಶ್ ವಹಿಸಿದ್ದರು. ಅಲ್ಯೂಮಿನಿ ಕ್ಲಬ್ ವಲಯ ಅಧ್ಯಕ್ಷರಾದ ರಂಗಸ್ವಾಮಿ, ಅಲ್ಯೂಮಿನಿ ಕ್ಲಬ್ ರಾಷ್ಟ್ರೀಯ ಉಪಾಧ್ಯಕ್ಷರಾದ ಕೆ.ಎಸ್.ಕುಮಾರ್, ಜೇಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ನವೀನ್ ಲಾಯ್ಡ್ ಮಿಸ್ಕಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಲ್ಯೂಮಿನಿ ಕ್ಲಬ್ ಕಾರ್ಯದರ್ಶಿ ಸುರೇಂದ್ರ, ಎಸ್.ಎಂ.ಎ. ಮಾಜಿ ವಲಯ ಅಧ್ಯಕ್ಷ ಶಶಿಕಾಂತ್, ಮೂಡಿಗೆರೆ ಜೇಸಿಐ ಅಧ್ಯಕ್ಷ ಸುಪ್ರೀತ್ ಕಾರ್ ಬೈಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನವಾಗಿ ಅಲ್ಯೂಮಿನಿ ಕ್ಲಬ್ ಸದಸ್ಯರಾದವರಿಗೆ ಗ್ರಾಜುಯೇಷನ್ ಪ್ರಮಾಣ ಪತ್ರ ವಿತರಿಸಲಾಯಿತು.
ಇದಕ್ಕೂ ಮುನ್ನ ಮೂಡಿಗೆರೆ ಕಾಫಿ ಕೋರ್ಟ್ ಸಭಾಂಗಣದಲ್ಲಿ ಅಲ್ಯೂಮಿನಿ ಕ್ಲಬ್ ವಲಯ ಮಂಡಳಿ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ ಅಲ್ಯೂಮಿನಿ ಕ್ಲಬ್ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.