ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗಕ್ಕೆ ಸಂಬಂಧಪಟ್ಟ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಸಂಸ ಮುಖಂಡರು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಡಿ.ಎನ್.ಶ್ರೀ ಧರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ವೆಂಕಟೇಶ್ ಮಾತನಾಡಿ ಪ್ರತಿ ವರ್ಷವು ಕೋಟ್ಯಾಂತರ ರೂ. ಕಾಮಗಾರಿಗಳನ್ನು ಎಸ್ಸಿಪಿ ಮತ್ತು ಟಿಎಸ್ಪಿ ಸಮುದಾಯದ ಹೆಸರಿನಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃಧ್ದಿಗಾಗಿ ಹಣ ಬಿಡುಗಡೆಗೊಂಡರೂ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ ಎಂದು ಹೇಳಿದರು.
ಎಸ್ಸಿ, ಎಸ್ಟಿ ಸಮುದಾಯದ ವಾಸಿಸುವ ಸ್ಥಳದಲ್ಲಿ ಅಭಿವೃದ್ದಿ ಕಾಮಗಾರಿ ಮಾಡದೇ, ಸಾಮಾನ್ಯ ವರ್ಗದ ಜನರು ವಾಸಿಸುವ ಪ್ರದೇಶಗಳಲ್ಲಿ ಕಾಮಗಾರಿ ಮಾಡಲಾಗಿದೆ. ಈ ಪ್ರಕರಣಗಳು ಪ್ರತಿವರ್ಷವು ವಂಚನೆ ಹಾಗೂ ಭಾರೀ ಭ್ರಷ್ಟಚಾರಗಳಿಂದ ಕೂಡಿರುತ್ತದೆ ಎಂದು ಆರೋಪಿಸಿದರು.
ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರನ್ನು ನೀಡಿದರೂ ಯಾವುದೇ ತನಿಖೆ ಅಥವಾ ಕ್ರಮಗಳನ್ನು ಜರುಗಿಸದ ಕಾರಣ ಎರಡು ವರ್ಷಗಳ ಸಾಲಿನಲ್ಲಿ ಎಸ್ಸಿಪಿ ಮತ್ತು ಟಿಎಸ್ಪಿ ಯೋ ಜನೆಗಳಲ್ಲಿ ಭಾರೀ ಭ್ರಷ್ಟಚಾರ ನಡೆಸಲಾಗಿದೆ. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದರೆ ಯಾವುದೇ ಕಾಮಗಾರಿ ಮಂಜೂರಾಗಿಲ್ಲ ಎಂದು ಅಧಿಕಾರಿಗಳು ಉಡಾಫೆ ಉತ್ತರ ನೀಡಲಾಗುತ್ತಿದೆ ಎಂದು ದೂರಿದರು.
ಎಂ.ಎ.ಡಿ.ಹಳ್ಳಿ ಮಲ್ಲೇಶ್ವರ ದೇವಸ್ಥಾನದಿಂದ ದುಂಗೆರೆ ಕಾಲೋನಿ ಸಂಪರ್ಕ ರಸ್ತೆ, ಈಶ್ವರಹಳ್ಳಿ ಗ್ರಾ.ಪಂ. ವಡೇರಹಳ್ಳಿ ರಸ್ತೆ, ಮೂಗ್ತಿಹಳ್ಳಿ ಗ್ರಾ.ಪಂ. ಶಿರಗುಂದ ಕಾಲೋನಿ ಕಾಂಕ್ರೀಟ್ ರಸ್ತೆ, ದುಂಗೆರೆಯಿಂ ದ ಎಂ.ಎಂ.ಡಿ.ಹಳ್ಳಿ ರಸ್ತೆಯ ಉಳಿಕೆ ಕಾಮಗಾರಿ, ಚಿಕ್ಕಕುರುಬರಹಳ್ಳಿಯಿಂದ ಬಿಳೇಕಲ್ಲು ರಸ್ತೆ ಅಭಿವೃದ್ದಿ, ನಗರದ ಹೌಸಿಂಗ್ಬೋರ್ಡ್ ಸಂಜೀವಿನಿ ಶಾಲೆ ಹಿಂಭಾಗವಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಸಾಗುವ ರಸ್ತೆ ಅಭಿವೃಧ್ದಿ ಸೇರಿದಂತೆ ಹಲವು ಕಡೆಗಳಲ್ಲಿ ಅನುದಾನವನ್ನು ದುರ್ಬಳಕೆ ಮಾಡಿ ಕೊಳ್ಳಲಾಗಿದೆ ಎಂದರು.
ಇಷ್ಟೆಲ್ಲಾ ಅವ್ಯವಹಾರ ಗಮನಿಸಿದರೆ ಸಂಬಂಧಪಟ್ಟ ಇಂಜಿನಿಯರ್ಗಳು ಭ್ರಷ್ಟಚಾರವನ್ನು ಮರೆಮಾ ಚಲು ಮುಂದಾಗಿರುವುದು ಸ್ಪಷ್ಟವಾಗಿದೆ. ಮಾಹಿತಿಯ ಮೇರೆಗೆ ಪರಿಶೀಲಿಸಲಾದ ಕಾಮಗಾರಿಗಳ ಪಟ್ಟಿಯ ಲ್ಲಿ ಈ ಮೇಲ್ಕಂಡ ಕಾಮಗಾರಿಗಳು ಭ್ರಷ್ಟತೆಯಿಂದ ಕೂಡಿದ್ದು ಎಸ್ಸಿ, ಎಸ್ಟಿ ಪಂಗಡಗಳಿಗೆ ಭಾರಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ದಿನೇಶ್, ಹರೀಶ್, ಪುಟ್ಟಸ್ವಾಮಿ, ಶಿವಕುಮಾರ್ ಇದ್ದರು.