ಚಿಕ್ಕಮಗಳೂರು ನಗರದಲ್ಲಿ ಬೈಕ್ ಮತ್ತು ಸ್ಕೂಟಿಯಲ್ಲಿ ವ್ಹೀಲಿಂಗ್ ಮಾಡಿಕೊಂಡು ಹೋಗುತ್ತಿದ್ದ ಇಬ್ಬರು ಯುವಕರ ವಿರುದ್ಧ ಪರಕರಣ ದಾಖಲಿಸಲಾಗಿದೆ.
ದಿನಾಂಕ 14.03.2024 ರಂದು ನಗರದಲ ಮೌಂಟೇನ್ ವ್ಯೂ ಕಾಲೇಜು ಹತ್ತಿರ ವ್ಹೀಲಿಂಗ್ ಮಾಡಿಕೊಂಡು ಅಪಾಯಕಾರಿ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಇಬ್ಬರು ಯುವಕರ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪಕರಣಗಳನ್ನು ದಾಖಲಿಸಿ, ಹೋಂಡಾ ಆಕ್ಟಿವಾ ಮತ್ತು ಡಿಸ್ಕವರಿ ಬೈಕ್ ವಶಪಡಿಸಿಕೊಂಡಿರುತ್ತಾರೆ.
ನಗರದಲ್ಲಿ ಯುವಕರು ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡಿಕೊಂಡು, ಸೈಲೆನ್ಸರ್ ಗಳನ್ನು ಪರಿವರ್ತಿಸಿ ಕರ್ಕಶ ಶಬ್ಧದೊಂದಿಗೆ ಬೈಕ್ ಗಳನ್ನು ಸವಾರಿ ಮಾಡುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗುವುದರ ಜೊತೆಗೆ ಪ್ರಾಣಾಪಾಯವನ್ನು ತಂದೊಡ್ಡುತ್ತಿದ್ದಾರೆ. ಇಂತಹ ಬೈಕ್ ಸವಾರರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ.