October 5, 2024

ಡಾ. ದೀಪಕ್

ನದಿಯಲ್ಲ ಈಜಾಡಲು ಹೋದಾಗ ಓರ್ವ ವೈದ್ಯ ಸೇರಿದಂತೆ ಇಬ್ಬರು ನೀರುಪಾಲಗಿರುವ ಘಟನೆ ನಡೆದಿದೆ.

ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಹೆಬ್ರಿಯಲ್ಲಿ ಈ ದುರ್ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವೈದ್ಯ ಸೇರಿದಂತೆ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

ಶೃಂಗೇರಿ ಧನ್ವಂತರಿ ಆಸ್ಪತ್ರೆಯ ವೈದ್ಯ ದೀಪಕ್ ಕೊಪ್ಪ (34 ವರ್ಷ), ಶಿವಮೊಗ್ಗ ಮೂಲದ ಉದ್ಯಮಿ ಶೈನು ಡ್ಯಾನಿಯಲ್ (40 ವರ್ಷ) ಮೃತ ದುರ್ದೈವಿಗಳು.

ಇವರೆಲ್ಲರೂ ಸ್ನೇಹಿತರು ಭಾನುವಾರದ ರಜಾದಿನದಲ್ಲಿ ಒಟ್ಟಾಗಿ ಸೇರಿದ್ದರು ಎನ್ನಲಾಗಿದೆ. ಎಲ್ಲರೂ ಮಧ್ಯಾಹ್ನ ಹೆಬ್ರಿ ಹೋಟೆಲ್ ಒಂದರಲ್ಲಿ ಒಟ್ಟಿಗೆ ಊಟ ಮಾಡಿದ್ದಾರೆ. ನಂತರ ಸೋಮೇಶ್ವರ ಕಡೆಗೆ ತೆರಳುವಾಗ ದಾರಿಯಲ್ಲಿ ಸಿಕ್ಕ ಸೀತಾ ನದಿಯಲ್ಲಿ ಸ್ನಾನ ಮಾಡಲೆಂದು ನೀರಿಗಿಳಿದಿದ್ದಾರೆ. ನೀರಿಗಿಳಿದ   ಡ್ಯಾನಿಯಲ್ ಆಯಾತಪ್ಪಿ ಬಿದ್ದಿದ್ದು  ಈಜು ಬಾರದ ಕಾರಣ ನೀರಿನಲ್ಲಿ ಮುಳುಗುತ್ತಿದ್ದಾಗ ಅವರನ್ನು ರಕ್ಷಣೆ ಮಾಡಲು ಹೋದ ವೈದ್ಯ ದೀಪಕ್ ಸಹ ನೀರಿನಲ್ಲಿ ಮುಳುಗಿದ್ದಾರೆ.

ಜೊತೆಗಿದ್ದ ಮತ್ತೊಬ್ಬ ಸ್ನೇಹಿತ ಡಾ. ವಿನ್ಸೆಂಟ್ ಸ್ನೇಹಿತರನ್ನು ರಕ್ಷಿಸಲು ಪ್ರಯತ್ನ ಪಟ್ಟಿದ್ದು, ಈಜು ಬಾರದ ಕಾರಣ ಅವರಿಂದ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಅವರು ಬೇರೊಂದನ್ನು ಹಿಡಿದು ಮೇಲೆ ಬಂದಿದ್ದಾರೆ.

ಒಟ್ಟಾರೆ ಈಜು ಬಾರದೇ ಇದ್ದರೂ ನದಿಯ ಅಪಾಯಕಾರಿ ಸ್ಥಳದಲ್ಲಿ ಸ್ನಾನ ಮಾಡಲು ಹೋಗಿ ಎರಡು ಅಮೂಲ್ಯ ಜೀವಗಳು ಬಲಿಯಾಗಿವೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ