ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅತಿವೇಗದಿಂದ ಬಂದ ಬೈಕ್ ಡಿಕ್ಕಿಹೊಡೆದ ಪರಿಣಾಮ ತೀವ್ರ ಗಾಯಗೊಂಡ ವ್ಯಕ್ತಿ ಮೃತಪಟ್ಟಿದ್ದಾರೆ.
ಮೂಡಿಗೆರೆ ಪಟ್ಟಣದ ಸಮೀಪ ಬಿಳಗುಳ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಬಿಳಗುಳ ವಿವೇಕಾನಂದ ನಗರದ ವಾಸಿ ಕಾರ್ಮಿಕ ನಾಗೇಂದ್ರ(55 ವರ್ಷ) ಬೈಕ್ ಡಿಕ್ಕಿಯಾಗಿ ಮೃತಪಟ್ಟವರು.
ಈ ಬಗ್ಗೆ ಮೃತ ನಾಗೇಂದ್ರ ಅವರ ಪುತ್ರ ಚಂದ್ರ ಮೂಡಿಗೆರೆ ಠಾಣೆಗೆ ದೂರು ನೀಡಿದ್ದಾರೆ. ನನ್ನ ತಂದೆ ನಾಗೇಂದ್ರ ಅವರು ಸೋಮವಾರ ರಾತ್ರಿ ಚಿಕನ್ ತರಲು ಬಿಳುಗುಳಕ್ಕೆ ಹೋಗುತ್ತಿರುವಾಗ ಹಾಂದಿ ಕಡೆಯಿಂದ ಬಂದ ಕೆಎ-02-ಹೆಚ್.ಎ. 7743 ಅಪಾಚಿ ಬೈಕಿನ ಚಾಲಕನು ಬೈಕ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಂದೆಯವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಗೆ ಪೆಟ್ಟಾಗಿ ಮೃತಪಟ್ಟಿದ್ದು, ಬೈಕ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.