ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಾಳೂರು ಹೋಬಳಿ ಮಾವಿನಕಟ್ಟೆಯಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜಾ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟಿನ ಟ್ರಸ್ಟಿಯಾದ ಪ್ರಶಾಂತ್ ಚಿಪ್ರಗುತ್ತಿ ಅವರು ಮಾತನಾಡಿ : ಪೂಜೆ ಒಂದು ಸುಧಾರಣಾ ಕ್ರಮ. ನಮ್ಮಲ್ಲಿ ಇರುವ ನ್ಯೂನತೆಗಳನ್ನ ದೂರ ಮಾಡಿ ಒಳಿತನ್ನ ಸ್ವೀಕಾರ ಮಾಡುವ ಪ್ರಕ್ರಿಯೆ ಪೂಜೆ. ಹಾಗಾಗಿ ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆಗಾಗಲಿ ದೇವಸ್ಥಾನಕ್ಕಾಗಲಿ ಹೋದಾಗ ಒಂದು ಕೆಟ್ಟ ವಿಚಾರಗಳನ್ನು ಬಿಟ್ಟು ಒಳ್ಳೆಯದನ್ನು ಸ್ವೀಕಾರ ಮಾಡಬೇಕು. ಹಾಗೆ ಮಾಡುತ್ತಾ ಬಂದರೆ ನಮ್ಮಲ್ಲಿ ಸುಧಾರಣೆ ಉಂಟಾಗಿ ಸಮಾಜದ ಸ್ವಾಸ್ಥ್ಯವನ್ನು ಹೆಚ್ಚು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಾಜಿ ಸಚಿವರಾದ ಶ್ರೀಮತಿ ಮೊಟ್ಟಮನವರು ಮಾತನಾಡಿ ನಮ್ಮ ಸಂಸ್ಕೃತಿ ಪರಂಪರೆಯನ್ನು ನಾವು ಕಡೆಗಣಿಸುತ್ತಿರುವ ಸಲುವಾಗಿ ಈಗಿನ ಯುವಕರು ದಾರಿ ತಪ್ಪಿದ್ದಾರೆ ಅಂತ ಯುವಕರನ್ನು ಸರಿಪಡಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದು ಹೇಳಿದರು.
ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರಕಾಶ್ ರಾವ್ ರವರು ಯೋಜನೆಯ ಹಲವಾರು ಸೌಲಭ್ಯಗಳ ಬಗ್ಗೆ ವಿವರಿಸಿತ್ತ ಶ್ರೀ ಸತ್ಯನಾರಾಯಣ ಸ್ವಾಮಿಯ ಕಾರ್ಯಕ್ರಮದಿಂದ ಮೌಲ್ಯಗಳು ವೃದ್ಧಿಯಾಗುತ್ತದೆ ಎಂದು ಹೇಳಿದರು.
ನಿಡುವಾಳೆ ಗಬ್ಗಲ್ನ ಸಹಕಾರ ಸಂಘದ ಅಧ್ಯಕ್ಷರಾದ ಶಿವರಾಜಗೌಡ, ಜಿ.ಪಂ ಮಾಜಿ ಸದಸ್ಯ ಬಿ.ಎಲ್.ಸಂದೀಪ್, ಕಾಫಿ ಬೆಳೆಗಾರರಾದ ಕಲ್ಮನೆ ಮಹೇಂದ್ರ, ಕೂವೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಹೇಮಾ, ಸದಸ್ಯೆ ಶಶಿತಾ, ಕಳಸ ತಾಲ್ಲೂಕು ಯೋಜನಾಧಿಕಾರಿ ಸುರೇಶ್, ಮುಖ್ಯ ಶಿಕ್ಷಕಿ ಶೋಭ, ಪೂಜಾ ಸಮಿತಿ ಅಧ್ಯಕ್ಷರಾದ ರವೀಂದ್ರ, ಪದಾಧಿಕಾರಿಗಳಾದ ಸಂದೇಶ್, ಕವನ, ಮಮತ, ನಿಮಿತ, ಸಂಗೀತಾ, ಸಾಗರ್, ಚಂದ್ರಶೇಖರ್ ಮುಂತಾದವರು ಇದ್ದರು.