ಮೂಡಿಗೆರೆ ನಗರದ ಲ್ಯಾಂಪ್ಸ್ ಸೊಸೈಟಿ ಸಭಾಂಗಣದಲ್ಲಿ ಚಿಕ್ಕಮಗಳೂರು ಜಿಲ್ಲಾಮಟ್ಟದ ಅತಿಥಿ ಶಿಕ್ಷಕರ ಸಮ್ಮೇಳನ ಏರ್ಪಡಿಸಲಾಗಿತ್ತು.
ಮೂಡಿಗೆರೆ-ಕಳಸ ಕ್ಷೇತ್ರ ಶಿಕ್ಷಣ ಅಧಿಕಾರಗಳಾದ ಹೇಮಂತ ಚಂದ್ರರವರು ಸಮ್ಮೇಳನವನ್ನ ಉದ್ಘಾಟನೆ ಮಾಡಿ ; ಅತಿಥಿ ಶಿಕ್ಷಕರರೆಲ್ಲರು ಉತ್ತಮವಾಗಿ ಸಂಘಟನೆ ಬಲಪಡಿಸಿ ನಿಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಕೊಳ್ಳುವ0ತೆ ಸಲಹೆ ನೀಡಿದರು.
ಸಂಘದ ಪ್ರಧಾನ ಕಾರ್ಯದರ್ಶಿಯಾದ ಬಸವರಾಜ ಕರಡಿಗುಡ್ಡರವರು ಅತಿಥಿ ಶಿಕ್ಷಕರ ಸ್ಥಿತಿಗತಿ ಹಾಗೂ ಸಂಘಟನೆ ಹಾಗೂ ಬೇಡಿಕೆಗಳ ಈಡೇರಿಕೆ ಕುರಿತು ಪ್ರಾಸ್ತಾವಿಕ ಮಾತುಗಳನ್ನ ಆಡಿದರು.
ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂಡಿಗೆರೆ ತಾಲ್ಲೂಕು ಗೌರವ ಅಧ್ಯಕ್ಷ ಪುಟ್ಟರಾಜು ಪಿ ಎಚ್ ಹಾಗೂ ಉಪಾಧ್ಯಕ್ಷ ಮಂಜಪ್ಪ ರವರು ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅತಿಥಿ ಶಿಕ್ಷಕರ ಪಾತ್ರ ಅವರ ಸಮಸ್ಯೆ ಮತ್ತು ಬೇಡಿಕೆಗಳ ಕುರಿತಂತೆ ವಿವರಣೆ ನೀಡಿದರು.
ರಾಜ್ಯ ಸಂಘದ ಅಧ್ಯಕ್ಷರಾದ ಹನುಮಂತ್ ಹೆಚ್ ಅವ್ರು ಅತಿಥಿ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ನಾವೆಲ್ಲಾ ಸಂಘತೀತರಾಗಿ ರಾಜ್ಯಮಟ್ಟದ ಹೋರಾಟ ಮಾಡಿದ ಕುರಿತು ಹೇಳಿದರು.
ಮೂಡಿಗೆರೆ ತಾಲೂಕ ಅಧ್ಯಕ್ಷರಾದ ಶ್ರೀಮತಿ ಲತಾ ಹೆಚ್. ಕೆ, ಕಳಸ ಅಧ್ಯಕ್ಷರಾದ ಆನಂದ, ಕೊಪ್ಪ ಅಧ್ಯಕ್ಷರಾದ ಶ್ರೀಮತಿ ಶುಭ, ಕೀರ್ತಿ, ಹರೀಶ್, ಆನಂದ, ರವಿ ಹಾಗೂ ಎಲ್ಲಾ ತಾಲೂಕಿನ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಅತಿಥಿ ಶಿಕ್ಷಕರು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.