ಸಂತ ಶಿಶುನಾಳ ಷರೀಫರ ಆಯ್ದ ಗೀತೆಗಳ ಗಾಯನ ಕಾರ್ಯಕ್ರಮವನ್ನು ಶೀಘ್ರದಲ್ಲಿ ಆಯೋಜಿಸಲಾಗುತ್ತಿದೆ ಎಂದು ನೇಚರ್ ಕ್ಲಬ್ ಸಂಸ್ಥಾಪಕ, ಸಾಹಿತಿ ಧನಂಜಯ ಜೀವಾಳ ತಿಳಿಸಿದ್ದಾರೆ.
ಮೂಡಿಗೆರೆಯಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಹಾಡಲು ಬಯಸುವವರು ತಮ್ಮ ಆಯ್ಕೆಯ ಗರಿಷ್ಠ ಮೂರು ಗೀತೆಗಳನು (ಒಂದೇ ಆದರೂ ನಡೆದೀತು) ತಮ್ಮದೇ ದನಿಯಲ್ಲಿ ಧ್ವನಿಮುದ್ರಿಸಿ ದಿನಾಂಕ : 31/01/2024ರ ಮುಂಚೆ ವಾಟ್ಸಪ್ ಮೂಲಕ ಧನಂಜಯ ಜೀವಾಳ ಅವರ ಮೊಬೈಲ್ ಸಂಖ್ಯೆ : 9448421946 ಗೆ ಕಳಿಸಿಕೊಡಬೇಕು.
ಆಯ್ಕೆಯಾದ ಹಾಡುಗಾರರು ಆ ಒಂದು ಗೀತೆಯನು ಕಾರ್ಯಕ್ರಮದಲಿ ಪ್ರಸ್ತುತಪಡಿಸಬಹುದು.
ಒಟ್ಟು ಇಪ್ಪತ್ತು ಹಾಡುಗಾರರಿಗೆ ತಲಾ ಒಂದು ಗೀತೆಯನು ಪ್ರಸ್ತುತ ಪಡಿಸಲು ಅವಕಾಶವಿರುತ್ತದೆ.
ಅಗತ್ಯವಿದ್ದಲ್ಲಿ ಕರವೋಕೆಯನು ಬಳಸಿಕೊಳ್ಳಬಹುದು.
ವಿವರಗಳಿಗೆ ಸಂಪರ್ಕಿಸಿ: ಶಾಂತಕುಮಾರ್ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಮೂಡಿಗೆರೆ 94487 44255.