ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯಲ್ಲಿ ಶುಕ್ರವಾರ ರೈತ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು. ಮೂಡಿಗೆರೆ ಜೇಸಿಐ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಮಾಕೋನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ಸಹಕಾರ ನೀಡಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಿಗೆರೆ ಜೇಸಿಐ ಅಧ್ಯಕ್ಷರಾದ ಸುಪ್ರೀತ್ ಕಾರಬೈಲ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೈತರಿಗೆ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳಿಂದ ಕಾಳುಮೆಣಸಿನ ಕೃಷಿ ವಿಧಾನಗಳ ಬಗ್ಗೆ ತರಬೇತಿ ನೀಡಲಾಯಿತು, ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರಾದ ಡಾ. ಕೃಷ್ಣಮೂರ್ತಿ ಹಾಗೂ ಕೃಷಿ ವಿಜ್ಞಾನಿ ಸುರೇಶ್ ಕುಮಾರ್ ರೈತರಿಗೆ ಕಾಳುಮೆಣಸು ಕೃಷಿ ಮತ್ತು ಸಹಜ ಕೃಷಿ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಎಂಟು ಜನ ಸಾಧಕ ರೈತರಿಗೆ ಸನ್ಮಾನಿಸಲಾಯಿತು. ಸವ್ಯಸಾಚಿ ಮಾಕೋನಹಳ್ಳಿ, ಶಿವೇಗೌಡ ಕನ್ನಾಪುರ, ಪ್ರಭಾಕರ ಮಾಲಹಳ್ಳಿ, ಜಯರಾಂ ಗಬ್ಬಳ್ಳಿ, ಹರೀಶ್ ನಂದೀಪುರ, ಧರ್ಮಪ್ರಕಾಶ್ ನಂದೀಪುರ, ಮದನ್ ಗೌತಳ್ಳಿ, ಅನಿಲ್ ಕುಮಾರ್ ಕಾರಬೈಲ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಕೋನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎನ್. ಅಶ್ವತ್, ಜೆಸಿಐ ವಲಯ ಉಪಾಧ್ಯಕ್ಷೆ ವಿದ್ಯಾರಾಜು, ಮಾಕೋನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಕಾಶ್, ಜೇಸಿಐ ಮೂಡಿಗೆರೆ ಪೂರ್ವಾಧ್ಯಕ್ಷ ಎಂ.ಬಿ. ಶಶಿಕರಣ್ ಮಾಕೋನಹಳ್ಳಿ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಸ್.ಪಿ. ರಾಜು ಸಂಗಮಪುರ, ತಾಲ್ಲೂಕು ಕೃಷಿಕ ಸಮಾಜದ ಕಾರ್ಯದರ್ಶಿ ಪಿ. ಕೆ. ನಾಗೇಶ್ ಪಟ್ಟದೂರು, ಮೂಡಿಗೆರೆ ಜೇಸಿಐ ನಿಕಟಪೂರ್ವ ಅಧ್ಯಕ್ಷೆ ಸವಿತಾ ರವಿ, ಜೇಸಿಐ ಕಾರ್ಯದರ್ಶಿ ದೀಕ್ಷಿತ್ ಕಣಚೂರ್, ಲೇಡಿ ಜೇಸಿಐ ಕಾರ್ಯದರ್ಶಿ ಶೃತಿ ದೀಕ್ಷಿತ್, ರೈತ ಸಂಘದ ಮುಖಂಡ ಡಿ.ಬಿ.ಜಯಪಾಲ್, ಮಾಕೋನಹಳ್ಳಿ ಸಹಕಾರ ಸಂಘದ ನಿರ್ದೇಶಕರುಗಳು ಹಾಗೂ ಜೇಸಿಐ ಮೂಡಿಗೆರೆ ಪದಾಧಿಕಾರಿಗಳು, ಪೂರ್ವ ಅಧ್ಯಕ್ಷರು, ಸದಸ್ಯರು, ಗ್ರಾಮದ ರೈತರು ಉಪಸ್ಥಿತರಿದ್ದರು.