ಕಾಡಾನೆ ದಾಳಿಯಿಂದ ಕಾಡಾನೆ ನಿಗ್ರಹ ಕಾರ್ಯಪಡೆ ಸಿಬ್ಬಂದಿಯೇ ಬಲಿಯಾಗಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಊರುಬಗೆ ಸಮೀಪ ಇಂದು ಸಂಜೆ ದುರ್ಘಟನೆ ನಡೆದಿದೆ.
ಆನೆ ಕಾರ್ಯಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ತಿಕ್ ಗೌಡ(27 ವರ್ಷ) ಕಾಡಾನೆಗೆ ಬಲಿಯಾಗಿದ್ದಾರೆ.
ಊರುಬಗೆ ಸಮೀಪದ ಹೊಸಕೆರೆ, ಮೇಕನಗದ್ದೆ ಎಂಬಲ್ಲಿ ಅರಣ್ಯದಲ್ಲಿ ಇಂದು ಸಂಜೆ ದುರ್ಘಟನೆ ನಡೆದಿದೆ.
ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾಗಲೇ ಸಿಬ್ಬಂದಿ ಮೇಲೆ ಕಾಡಾನೆ ಎರಗಿ ಬಂದಿದೆ.
ಕಾರ್ತಿಕ್ ಮೇಲೆ ಕಾಡಾನೆ ದಾಳಿ ನಡೆಸಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಇತರೆ ಕೆಲ ಸಿಬ್ಬಂದಿಯೂ ಗಾಯಗೊಂಡಿದ್ದಾರೆ ಎಂಬ ಮಾಹಿತಿಯಿದೆ.
ಕಾರ್ತಿಕ್ ಗೌಡ ಮೂಡಿಗೆರೆ ತಾಲ್ಲೂಕಿನ ಗೌಡಹಳ್ಳಿ ಗ್ರಾಮದವರು. ಕಳೆದ ಒಂದು ವರ್ಷದಿಂದ ಆನೆ ಕಾರ್ಯಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಗೌಡಹಳ್ಳಿ ಗ್ರಾಮದ ದಿವಂಗತ ಈರಪ್ಪಗೌಡ ಶ್ರೀಮತಿ ಸರೋಜ ಅವರ ಪುತ್ರ.
ಕಾರ್ತಿಕ್ ಪೋಷಕರಿಗೆ ಏಕೈಕ ಪುತ್ರನಾಗಿದ್ದ.