ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಮೂಡಿಗೆರೆ ವತಿಯಿಂದ ಪ್ಯಾರಾ ಏಷಿಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ರಕ್ಷಿತಾರಾಜು ಸನ್ಮಾನಿಸಲಾಯಿತು.
ಶನಿವಾರ ಬಾಳೂರಿನ ಗುಡ್ನಳ್ಳಿಯ ಅವರ ಮನೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು. ಕೋಚ್ ರಾಹುಲ್ ಬಾಲಕೃಷ್ಣ, ತಬರೇಜ್ ಖಾನ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಅಧ್ಯಕ್ಷ ಶಿವೇಗೌಡ,ಉಪಾಧ್ಯಕ್ಷ ಎಂ.ಕೆ.ಶಣ್ಮುಖಾನಂದ, ಸಂಘಟನಾ ಕಾರ್ಯದರ್ಶಿ ಎಂ.ಎನ್. ಗಿರೀಶ್, ಬಣಕಲ್ ವಲಯ ಸಮಿತಿ ಅಧ್ಯಕ್ಷ ಶಂಕರ್ ಟೈಲರ್, ಉಪಾಧ್ಯಕ್ಷ ಕೃಷ್ಣ ಟೈಲರ್ ಜಾವಳಿ, ಬಿಳುಗುಳ ವಲಯ ಸಮಿತಿ ಅಧ್ಯಕ್ಷ ಮಂಜುಳ ಟೈಲರ್, ,ತೀರ್ಥ ಟೈಲರ್, ವಿಶ್ವನಾಥ್ ಮತ್ತಿತರರು ಇದ್ದರು.