ಮೂಡಿಗೆರೆ ತಾಲ್ಲೂಕು ಬಿ ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಪಲ್ಗುಣಿ ಇದರ ಅಧ್ಯಕ್ಷರಾಗಿ ರಮೇಶ್ ಬಾನಹಳ್ಳಿ ಆಯ್ಕೆ ಯಾಗಿದ್ದಾರೆ.
ಒಪ್ಪಂದದಂತೆ ಈ ಹಿಂದಿನ ಅಧ್ಯಕ್ಷ ರಕ್ಷಿತ್ ಬಡವನದಿಣ್ಣೆ ಅವರು ರಾಜೀನಾಮೆ ನೀಡಿದ್ದರು. ಇದರಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಬಿ.ಎಂ. ರಮೇಶ್ ಬಾನಹಳ್ಳಿ ಇವರು ಅವಿರೋದವಾಗಿ ಆಯ್ಕೆ ಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಸಂಘದ ಹಿರಿಯ ಸಹಕಾರಿಗಳಾದ ಓ.ಎಸ್. ಗೋಪಾಲಗೌಡ್ರು ಮತ್ತು ಉಪಾಧ್ಯಕ್ಷರು ಹೆಚ್.ಟಿ. ಪ್ರಸನ್ನ, ನಿರ್ದೇಶಕರಾದ ಕೆ ಬಿ ಗೋಪಾಲಗೌಡ, ಓ ಜಿ ರವಿ. ಬಿ.ಎಸ್. ರಕ್ಷಿತ್ , ಹೆಚ್.ಎ. ಅಮೋಘ, ಹೆಚ್.ಎಂ. ರಚನಾ, ಹೆಚ್.ಕೆ. ಸಾವಿತ್ರಿ, ಟಿ.ಎ. ಶೇಖರ ಪೂಜಾರಿ, ಬಿ.ಎಂ. ರಮೇಶ್, ಎಸ್. ಸುಂದರ, ಬಿ.ಎಲ್. ಉಪೇಂದ್ರ, ಹೆಚ್.ಎ. ದ್ಯಾವಣ್ಣಗೌಡ ಉಪಸ್ಥಿತರಿದ್ದರು.
ಚುನಾವಣೆ ಅಧಿಕಾರಿ ಶ್ರೀಮತಿ ಜ್ಯೋತಿ ಲಕ್ಷ್ಮಿ ಮತ್ತು ಮೇಲ್ವಿಚಾರಕರಾದ ಯು.ಸಿ. ಪ್ರಯಾಗ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಆರ್. ವೇಣುಗೋಪಾಲ್ ರವರು ಇದ್ದರು