ದಿನಾಂಕ 30.09.2024 ರಂದು ಪೊಲೀಸ್ ಇಲಾಖೆ ಸೇವೆಯಿಂದ ವಯೋನಿವೃತ್ತಿ ಹೊಂದಿದ ಸತ್ಯನಾರಾಯಣ ಕೆ, ಪೊಲೀಸ್ ವೃತ್ತ ನಿರೀಕ್ಷಕರು, ಆಲ್ದೂರು ವೃತ್ತ ರವರನ್ನು ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಗೌರವಿಸಿ ಬೀಳ್ಕೊಡಲಾಯಿತು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿಯವರು ಸತ್ಯನಾರಾಯಣ ದಂಪತಿಗಳನ್ನು ಸನ್ಮಾನಿಸಿ, ಅವರ ನಿವೃತ್ತಿ ಜೀವನ ಸುಖಕರವಾಗಿರ ಲೆಂದು ಹಾರೈಸಿರುತ್ತಾರೆ.
ಸತ್ಯನಾರಾಯಣ ಕೆ ಅವರು ದಿನಾಂಕ 26.07.1988 ರಂದು ಪೊಲೀಸ್ ಇಲಾಖೆ ಸೇವೆಗೆ ಸೇರಿ 36 ವರ್ಷ ಕಾಲ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಉತ್ತಮವಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಇವರು 2018 ರಲ್ಲಿ ಪ್ರತಿಷ್ಠಿತ Police Medal for Meritorious Service ಮತ್ತು 2019ರಲ್ಲಿ ಮುಖ್ಯಮಂತ್ರಿಗಳ ಪದಕ ಪಡೆದಿರುತ್ತಾರೆ.