ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಗಲಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಶೌರ್ಯ ನಿರ್ವಹಣಾ ಘಟಕ ಜಾವಳಿ ವಲಯ, ವಿಷನ್ ಸ್ಪ್ರಿಂಗ್ ಸಂಸ್ಥೆ , ಸುಂಕಸಾಲೆ ಗ್ರಾಮ ಪಂಚಾಯಿತಿ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ಸತ್ಯೇಂದ್ರ ಹೆಬ್ಬಾರ್ ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳಸ ತಾಲೂಕು ಯೋಜನಾಧಿಕಾರಿಗಳಾದ ಸುರೇಶ್, ಸುಂಕಸಾಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬೇಬಿ, ಕಾಮಿಡಿ ಕಿಲಾಡಿ ಶೋ ಸ್ಪರ್ಧಿ ರಮೇಶ್ ಯಾದವ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪದ್ಮರಾಜ್, ಮಾಜಿ ಅಧ್ಯಕ್ಷ ಬಿಳಗಲಿ ಅಶೋಕ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಾಗರ್ ಮರ್ಕಲ್, ಪರೀಕ್ಷಿತ್ ಜಾವಳಿ, ವಿಷನ್ ಸ್ಪ್ರಿಂಗ್ ಸಂಸ್ಥೆಯ ಜೈಪಾಲ್, ಜಾವಳಿ ವಲಯ ಮೇಲ್ವಿಚಾರಕರಾದ ಸಂದೇಶ್ ಯು.ಎಸ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚೈತ್ರ, ಸೇವಾ ಪ್ರತಿನಿಧಿ ಸೋಮಶೇಖರ್, ರಂಜಿತ್, ಗ್ರಾಮಸ್ಥರಾದ ಸಮರ್ಥ್ ಮುಂತಾದವರಿದ್ದರು.