ಒತ್ತುವರಿ ತೆರವು ಕೈಬಿಡುವಂತೆ ಆಗ್ರಹಿಸಿ ಕಳಸ ಪಟ್ಟಣ ಬಂದ್ ಯಶಸ್ವಿಯಾಗಿ ನಡೆಯಿತು
ಸಾವಿರಾರು ಜನರು ಕಳಸ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಸಿದರು.
ಪ್ರತಿಭಟನಾ ಮಾರ್ಗದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೈಕೋರ್ಟ್ ಜಡ್ಜ್ ತೆರಳಿದ್ದು ನಮ್ಮ ನೋವು ನ್ಯಾಯಮೂರ್ತಿಗಳಿಗೂ ಗೊತ್ತಾಗಲಿ ಎಂದು ಘೋಷಣೆ ಕೂಗಿದರು.
ಕೂಡಲೇ ಒತ್ತುವರಿ ತೆರವು ಕೈಬಿಡುವಂತೆ ಸರ್ಕಾರಕ್ಕೆ ಆಗ್ರಹಿಸಿದ ಪ್ರತಿಭಟನಾಕಾರರು
ಬದುಕಿಗಾಗಿ ಮಾಡಿರುವ 2-3 ಎಕರೆ ಸಾಗುವಳಿ ಹೆಚ್ಚಾಗಿದ್ದು, ಒತ್ತುವರಿ ತೆರವು ಮಾಡಿದರೆ ಸಾವಿರಾರು ಕುಟುಂಬಗಳು ಬೀದಿಗೆ ಬರಲಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಬಂದ್ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವಾಣಿಜ್ಯ ವ್ಯವಹಾರ , ವಾಹನ ಸಂಚಾರ, ಸ್ಥಗಿತಗೊಂಡಿತ್ತು. ವಿವಿಧ ಪಕ್ಷ ಮತ್ತು ಸಂಘಟನೆಗಳ ಮುಖಂಡರು ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.