ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆಯ ಮಂಡಲುಬೈಲ್ ಗದ್ದೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ ಎಂದು ಕ್ರೀಡಾಕೂಟದ ಅಧ್ಯಕ್ಷ ಮಧುಕುಮಾರ್ ಹೇಳಿದರು.
ಪತ್ರಿಕಾ ಹೇಳಿಕೆ ನೀಡಿ ಅವರು ಮಾತನಾಡಿದರು ಭಾನುವಾರ ಬೆಳಿಗ್ಗೆ ಆರಂಭವಾಗಲಿರುವ ಕ್ರೀಡಾಕೂಟದಲ್ಲಿ ನಿಧಿಶೋಧ, ಹಗ್ಗಜಗ್ಗಾಟ, ಒಂಟಿ ಕಾಲು ಓಟ, ಹಗ್ಗ ಜಗ್ಗಾಟ, ಲೆಮನ್ ಸ್ಪೂನ್ ಓಟ, 100ಮೀ ಓಟ, ವಾಲಿಬಾಲ್, ಥ್ರೋಬಾಲ್ ಪುರುಷರು ಮತ್ತು ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿದ್ದು, ಪ್ರತ್ಯೇಕ ಪ್ರವೇಶ ಶುಲ್ಕ ಇರುತ್ತದೆ.
ಕ್ರೀಡಾಕೂಟದ ಸಮಾರಂಭಕ್ಕೆ ಕಾಮಿಡಿ ಕಿಲಾಡಿಯ ರಮೇಶ್ ಯಾದವ್ ಭಾಗವಹಿಸಲಿದ್ದು,ಅಧ್ಯಕ್ಷತೆ ಮಧು, ಕೆಚ್ಚೆದೆಯ ಕನ್ನಡತಿ ಅಕ್ಕ ಅನು, ಬಣಕಲ್ ಸಬ್ ಇನ್ ಸ್ಪೆಕ್ಟರ್ ಡಿ.ವಿ.ರೇಣುಕಾ ಮತ್ತಿತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಸಂದರ್ಭದಲ್ಲಿ ಕ್ರೀಡಾಕೂಟದ ಆಯೋಜಕರಾದ ಪರಿಕ್ಷಿತ್, ಅಶ್ವಥ್, ಪ್ರವೀಣ್ ಸಾಗರ್ ಮೊದಲಾದವರು ಇದ್ದರು.
ಕ್ರೀಡಾಕೂಟದ ಬಗ್ಗೆ ಹೆಚ್ಚಿನ ಮಾಹಿತಿಗೆ ಮಧು- 8217315138, ಸಂಜಯ್- 9986998624, ಪರೀಕ್ಷಿತ್- 9449206101, ಪ್ರಶಾಂತ್-9448555542 ಸಂಖ್ಯೆಗೆ ಸಂಪರ್ಕಿಸಬಹುದು.